Webdunia - Bharat's app for daily news and videos

Install App

ಜಯಲಲಿತಾ ಕೆನ್ನೆಯ ಮೇಲೆ ರಂಧ್ರಗಳು...ಕಾರಣವೇನು?

Webdunia
ಶುಕ್ರವಾರ, 9 ಡಿಸೆಂಬರ್ 2016 (10:44 IST)
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಹೃದಯಾಘಾತದಿಂದ ಸಾವಿಪ್ಪಿದ ಬಳಿಕ ತಮಿಳುನಾಡಿನಲ್ಲಿ ನಾನಾ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಅವರ ಕ್ಲೋಸಪ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅವರ ಕೆನ್ನೆ ಮೇಲಿನ ರಂಧ್ರಗಳಿರುವ ಫೋಟೋ ಗಮನಸೆಳೆಯುತ್ತಿದೆ.
 
ಕೆನ್ನೆ ಮೇಲೆ ಆ ರಂಧ್ರಗಳನ್ನು ಯಾಕೆ ಮಾಡಿದರು? ಏನಿರಬಹುದು ಇದಕ್ಕೆ ಕಾರಣ ಅನ್ನೋ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಯಾರಾದರು ಮರಣಿಸಿದರೆ..ಅವರ ದೇಹ ಕೆಲವು ದಿನಗಳ ಕಾಲ ಕೆಡದಂತೆ ಇರಲು ವೈದ್ಯರು ’ಎಮಾಲ್ಮಿಂಗ್’ ಮಾಡುತ್ತಿರುತ್ತಾರೆ. ದೇಹಕ್ಕೆ ಕೆಲವು ರಾಸಾಯನಿಕಗಳನ್ನ, ಔಷಧಿಗಳಿಂದ ಶುದ್ಧಿ ಮಾಡುವುದರೊಂದಿಗೆ, ದೇಹದೊಳಕ್ಕೂ ಔಷಧಿಗಳನ್ನು ಸೇರಿಸುತ್ತಾರೆ.
 
ಮೃತದೇಹದಲ್ಲಿನ ರಕ್ತ ಹೊರಗೆ ತೆಗೆದು, ರಸಾಯನಿಕಗಳನ್ನು ದೇಹಕ್ಕೆ ಸೇರಿಸುವ ಪ್ರಕ್ರಿಯೆ ಇದು. ಆದರೆ ಸಹಜವಾಗಿ ಸೂಚಿಯನ್ನು ಕತ್ತಿನ ಹಿಂಭಾಗ ಅಥವಾ ತೊಡೆಸಂಧುಗಳಲ್ಲಿ ಹಾಕುತ್ತಾರೆ. ಜಯಲಲಿತಾ ಅವರ ಪಾರ್ಥೀವ ದೇಹಕ್ಕೂ ವೈದ್ಯರು ಈ ರೀತಿ ಮಾಡಿರುವ ಸಾಧ್ಯತೆಗಳಿವೆ. 
 
ಜಯಲಲಿತಾ ಅವರಿಗೆ ಹೃದಯಾಘಾತವಾದಾಗಿನಿಂದ ಅವರು ಚಿರನಿದ್ರೆಗೆ ಜಾರುವವರೆಗೂ ವೈದ್ಯರು ’ಎಕ್ಮೋ’ ಚಿಕಿತ್ಸೆ ಮಾಡಿದ್ದಾರೆ. ಅದೇ ರೀತಿ ಎಮಾಲ್ಮಿಂಗ ಸಹ ಮಾಡಿರಬಹುದು. ಇದಕ್ಕಾಗಿ ಸೂಚಿ ಚುಚ್ಚುವಂತಹ ಪರಿಸ್ಥಿತಿ ಬಂದಿರಬಹುದು. ಆದರೆ ಕೆನ್ನೆ ಮೇಲೆ ರಂಧ್ರಗಳು ಕಾಣಿಸಿಕೊಂಡಿರುವುದು ಇದು ಎಮಾಲ್ಮಿಂಗ್ ನಿಂದ ಆಗಿರುವುದಾ ಅಥವಾ ಬೇರೆ ಚಿಕಿತ್ಸೆಗಾಗಿ ಮಾಡಿದ ರಂಧ್ರಗಳಾ ಅನ್ನೋ ಚರ್ಚೆ ನಡೆಯುತ್ತಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments