Select Your Language

Notifications

webdunia
webdunia
webdunia
webdunia

ಅಜಯ್ ರಾವ್-ಸಿಂಧು ಲೋಕನಾಥ್ ಅವರ ಒಂದು ಮುತ್ತಿನ ಕಥೆ

ಅಜಯ್ ರಾವ್-ಸಿಂಧು ಲೋಕನಾಥ್ ಅವರ ಒಂದು ಮುತ್ತಿನ ಕಥೆ
bangalore , ಸೋಮವಾರ, 17 ನವೆಂಬರ್ 2014 (12:25 IST)
ಸ್ಯಾಂಡಲ್ ವುಡ್ ತಾರೆಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಸಾಕಷ್ಟು  ಬದಲಾವಣೆ ಹೊಂದುತ್ತಿದ್ದಾರೆ. ತಮ್ಮ ನಟನೆಯನ್ನು ಮತ್ತಷ್ಟು ಹುರಿಗೊಳಿಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಅವರು ಮನಗಂಡಿದ್ದಾರೆ.

ಸುಮ್ಮನೆ ಅದೇ ಕಥೆ, ಅದೇ ನಟನೆಯು ಮಾಡುತ್ತಾ ಕುಳಿತರೆ ಎಂದಿಗೂ ಗೆಲುವು ಕಾಣಲು ಸಾಧ್ಯ ಇಲ್ಲ ಎನ್ನುವ ಸತ್ಯದ ಅರಿವಾಗಿದೆ ಅವರಿಗೆ. ಅಂತಹ ಬದಲಾವಣೆಯತ್ತ ಅಜಯ್ ರಾವ್ ಸಹ ಗಮನ ನೀಡಿದ್ದಾರೆ. ಸ್ಯಾಂಡಲ್ ವುಡ್ ನ ಸ್ವಲ್ಪ ಮಡಿವಂತಿಕೆಯ ನಟ ಈಗ ಮೈ ಚಳಿ ಬಿಟ್ಟು ನಟಿಸಲು ಆರಂಭ ಮಾಡಿದ್ದಾರೆ. ಅವರು ತಮ್ಮ ಹೊಸ ಚಿತ್ರ ಜೈ ಭಜರಂಗ ಬಲಿ ಯಲ್ಲಿ ಪ್ರಣಯ ದೃಶ್ಯಗಳಲ್ಲಿ ಭಾಗವಹಿಸಲು ಹೀಚರಿಕೆ ತೋರುತ್ತಿಲ್ಲ. 
 
ಅಜಯ್ ರಾವ್ ಅವರು ತಮ್ಮ ಸಹನಟಿ ಸಿಂಧು ಲೋಕನಾಥ್ ಅವರಿಗೆ  ಎಲ್ಲರ ಮುಂದೆ ಮುತ್ತು ಕೊಟ್ಟಿದ್ದಾರೆ. ಅಂದರೆ ಪ್ರಣಯ ದೃಶ್ಯದಲ್ಲಿ ಭಾಗವಹಿಸಿ ಮುತ್ತು ಕೊಡುವ ದೃಶ್ಯದಲ್ಲಿ ಪಾಲ್ಗೊಂಡಿದ್ದಾರೆ.  
 
ಆರಂಭಿಕ ಹಂತದಲ್ಲಿ ಇವರಿಬ್ಬರು ಸಂಕೋಚ ಪಟ್ಟರು ಆ ಬಳಿಕ ಮುತ್ತಿನ ಕೊಡುಗೆ ನೀಡಲು -ಪಡೆಯಲು ಸಿದ್ಧ ಆದರಂತೆ. ಬಾಲಿವುಡ್‌ನಲ್ಲಿ ಮುತ್ತು ಕೊಡೋದು ಸಾಮಾನ್ಯ ಸಂಗತಿ. ಕನ್ನಡಿಗರಿಗೆ ಕಷ್ಟ. ಆದರೆ ಗೆಲ್ಲಲು ಸಾಹಸ ಮಾಡಲೇ ಬೇಕು..  ಇದು ಅಜಯ್ -ಸಿಂಧು ಅವರ ಒಂದು ಮುತ್ತಿನ ಕಥೆ !
 

Share this Story:

Follow Webdunia kannada