ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತನಗೊಂದು ಉತ್ತಮ ಸ್ಥಾನ ಪಡೆದಿದ್ದ ನಟಿ ಶ್ವೇತಾ ಬಸು ಬದುಕಲ್ಲಿ ಉಂಟಾದ ತಿರುವಿನಿಂದ ಆಕೆಯು ಎಲ್ಲರ ಗಮನಕ್ಕೆ ಸಿಕ್ಕಿ ಬಿದ್ದಳು.ಒಂದು ಸ್ಥಳೀಯ ವಾಹಿನಿ ನಡೆಸಿದ ಸ್ಟಿಂಗ್ ನಿಂದ ಆಕೆಯು ವೇಶ್ಯಾವಾಟಿಕೆಯಲ್ಲಿ ತೊಡಗಿದಾಳೆ ಎಂದು ನಿಶ್ಚಯಿಸಿ ಬಂಧಿಸಲಾಯಿತು. ಆದರೆ ಕೋರ್ಟ್ ಆಕೆಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದ್ದು ಹಳೆಯ ಸಂಗತಿ. ಈಗ ಆಕೆಯನ್ನು ನಿರ್ದೋಷಿ ಎಂದು ಕೋರ್ಟ್ ಹೇಳಿದರು ಸಹಿತ ಶ್ವೇತಾಗೆ ದೊರಕಿರುವ ಅವಕಾಶಗಳು ಮಾತ್ರ ಬಹಳ ಕಡಿಮೆ ಎಂದೇ ಹೇಳ ಬಹುದಾಗಿದೆ.
ಬಂಡ ಕೆಲವು ಅವಕಾಶಗಳು ಐಟಂ ನಂಬರ್ನಲ್ಲಿ ನಟಿಸುವುದಕ್ಕೆ ಆದ್ಯತೆ ನೀಡಿದ ಕಾರಣ ಆಕೆ ಅದಕ್ಕೆ ಸಮ್ಮತಿಸಿಲ್ಲ. ಆದರೆ ಇದೆ ಸಮಯದಲ್ಲಿ ಹಿಂದಿ ಭಾಷೆಯ ಚಾನೆಲ್ ಒಂದು ಮಾಡುತ್ತಿರುವ ವಯಸ್ಕರ ಕಾರ್ಯಕ್ರಮಕ್ಕೆ ಶ್ವೇತ ಬಸುಳನ್ನು ನಿರೂಪಕಿಯಾಗಿ ಆಗಲು ಅವಕಾಶ ನೀಡಿದೆ. ಆ ಶೋ ಕಾನ್ಸೆಪ್ಟ್ ಕೇಳಿದ ನಂತರ ತಾನು ಅದನ್ನು ಮಾಡಲ್ಲ ಎಂದು ತಿರಸ್ಕರಿಸಿದ್ದಾಳೆ ಶ್ವೇತಾ.
ಲೈಂಗಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಆ ಷೋ ನಲ್ಲಿ ಸಾರ್ವಜನಿಕರ ಮುಂದೆ ಹೇಳುವ ಕೆಲಸ ಆಕೆಯದ್ದಾಗಿದೆ. ಆ ಸಂಗತಿ ತನಗೆ ಕಿರಿಕಿರಿ ಉಂಟು ಮಾಡಿತು ಎಂದಿರುವ ಶ್ವೇತ ಸದ್ಯಕ್ಕೆ ಅದರತ್ತ ಯಾವುದೇ ನಿರ್ಣಯ ಕೈಗೊಂಡಿಲ್ಲ. ಹಾಗೆಂದು ಆ ಚಾನೆಲ್ ಸುಮ್ಮನೆ ಕುಳಿತಿಲ್ಲ, ಆಕೆಗೆ 3 ಕೋಟಿ ನೀಡುವುದಾಗಿ ಆಮಿಷ ಒಡ್ಡಿದೆ. ಈಗ ಶ್ವೇತ ಏನ್ ಮಾಡುತ್ತಾಳೆ ಎನ್ನುವುದು ಯಾರಿಗೂ ಗೊತ್ತಿಲ್ಲ.