ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನ ಮಗ ಅಯ್ಯು ಸಿನಿಮಾ ಶೀರ್ಷಿಕೆಯನ್ನೇ ಕೊಂಚ ಬದಲಾವಣೆ ಮಾಡಿಕೊಂಡು ಭೂತಯ್ಯನ ಮೊಮ್ಮಗ ಅಯ್ಯು ಸಿನಿಮಾ ಬರುತ್ತಿರುವುದು ಗೊತ್ತಿರುವ ಸಂಗತಿ.
ಇದೀಗ ಈ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಅವರು ಬೇರಾರು ಅಲ್ಲ ಶ್ರುತಿ ಹರಿಹರನ್. ಈ ಚಿತ್ರದ ತಾರಾಗಣದಲ್ಲಿ ಚಿಕ್ಕಣ್ಣ, ಸಾಧು ಕೋಕಿಲ, ಹೊನ್ನವಳ್ಳಿ ಕೃಷ್ಣ, ರಾಕ್ ಲೈನ್ ಸುಧಾಕರ್, ಉಮೇಶ್, ಮನದೀಪ್ ರಾಯ್ ಹೀಗೆ ಬಹುತೇಕ ಕಾಮಿಡಿ ಕಲಾವಿದರೇ ಇದ್ದಾರೆ.
ಪದೇ ಪದೇ, ನಮಕ್ ಹರಾಮ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಾಗರಾಜ್ ಪೀಣ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಅಂತಾರೆ. ಭೂತಯ್ಯನ ಮಗ ಅಯ್ಯು ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ನಿರ್ದೇಶಕರು ಇದೊಂದು ಪಕ್ಕಾ ಕಾಮಿಡಿ ಚಿತ್ರ. ಹಳ್ಳಿಯ ನೈಜ ಘಟನೆಗಳೇ ಚಿತ್ರದ ಜೀವಾಳ. ಆದಷ್ಟು ನೈಜತೆಗೆ ಒತ್ತು ಕೊಟ್ಟಿದ್ದೇವೆ ಎನ್ನುತ್ತಾರೆ.
ಈ ಚಿತ್ರ ಈಗಾಗಲೇ 40 ದಿನಗಳ ಕಾಲ ಚಿತ್ರೀಕರಣ ಮಳವಳ್ಳಿ, ಕನಕಪುರ, ಸಾತನೂರು, ಕೆಮ್ಮಾಳೆ, ಪಾಂಡವಪುರದಲ್ಲಿ ನಡೆದಿದೆ. ಈ ಚಿತ್ರಕ್ಕೆ ಛಾಯಾಗ್ರಾಹಕ - ನಂದಕುಮಾರ್, ಸಂಕಲನ - ಶ್ರೀನಿವಾಸ್ ಬಾಬು, ಸಹನಿರ್ದೇಶನ – ಚಂದ್ರು ಮಳವಳ್ಳಿ, ಸಹ ನಿರ್ಮಾಪಕರು – ರವಿಶಂಕರ್, ಅನಿಲ್, ಪರಮೇಶ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.