Webdunia - Bharat's app for daily news and videos

Install App

ಪಾಪ... ಶೃತಿ ಹಾಸನ್‌ಗೆ ಟೈಮೇ ಸರಿಯಾಗಿಲ್ಲ!

Webdunia
ಗುರುವಾರ, 9 ಏಪ್ರಿಲ್ 2015 (09:56 IST)
ಶೃತಿ ಹಾಸನ್ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನಿಮಾರಂಗದಲ್ಲಿ ತನ್ನದೇ ಆದ ಛಾಪು ಒತ್ತಿದಂತಹ ನಟಿ. ಆಕೆಯ ಕಾಲ್ ಅದ್ಯಾಕೋ ಈಗ ಸರಿ ಇಲ್ಲ ಅಂತ ಕಾಣುತ್ತೆ, ಯಾಕೇಂದ್ರೆ ಸಿನಿಮಾದಲ್ಲಿ ನಟಿಸುವಾಗ ಅತಿಯಾದ ಆತುರ ತೋರಿ ಎಲ್ಲಾ ಚಿತ್ರಗಳಿಗೂ ಒಪ್ಪಿಗೆ ನೀಡಿ ಅದಕ್ಕೆ ಸಮಯದ ಹೊಂದಾಣಿಕೆ ಸಾಧ್ಯವಾಗದೆ, ಅಂತಿಮವಾಗಿ ಆಕೆಯ ಬಗ್ಗೆ ಸಿನಿಮಾದವರು ಕೇಸ್ ಹಾಕಿ, ಆ ಕೇಸ್ ಕೋರ್ಟ್ ಅಂಗಳದಲ್ಲಿ ಓಡಾಡುತ್ತಿದೆ. ಇಷ್ಟೆಲ್ಲಾ ಇರುವಾಗ ಮತ್ತೆ ಆಕೆಯನ್ನು ಮತ್ತೊಂದು ಸಮಸ್ಯೆ ಹುಡುಕಿಕೊಂಡು ಬಂದಿದೆ. 
ಶೃತಿ ನಟಿಸುತ್ತಿರುವ ಒಂದು ಸಿನಿಮಾ ಶೂಟಿಂಗ್‌ಗೆಂದು ಆಕೆ ಚಿತ್ರೀಕರಣಕ್ಕೆಂದು ಹೈದರಾಬಾದ್‌ನಿಂದ  ತಿರುಪತಿಗೆ ವಿಮಾನದಲ್ಲಿ ಹೋಗುತ್ತಿರುವಾಗ, ಓರ್ವ ಪ್ರಸಿದ್ಧ ರಾಜಕೀಯ ನಾಯಕ ಮತ್ತು ಶೃತಿ ನಡುವೆ ವಾದವಿವಾದಗಳು ನಡೆಯಿತಂತೆ. 
 
ಇನ್ನು ವಿವರವಾಗಿ ಹೇಳಬೇಕೆಂದರೆ, ಶ್ರುತಿ ಪಕ್ಕದಲ್ಲಿ ಕುಳಿತ ಆ ರಾಜಕೀಯ ನಾಯಕ ಗಟ್ಟಿಯಾಗಿ ಫೋನ್‌ನಲ್ಲಿ ಮಾತನಾಡುತ್ತಾ ಯಾವುದೋ ವಿಷಯದ ಬಗ್ಗೆ ಬಿರುಸಿನ ವಾದ ಮಾತುಕಥೆ ನಡೆಸಿದ್ದರಂತೆ! ಆತನ ದೊಡ್ಡ ಧ್ವನಿಯ ಬಗ್ಗೆ ಬೇಸತ್ತಳು. ಅವರು ಅಲ್ಲಿನ ಹೆಸರುವಾಸಿ ರಾಜಕಾರಣಿ ಎಂದು ತಿಳಿಯದೆ ಶೃತಿ ಹಾಸನ್ ಅಸಹನೆ ವ್ಯಕ್ತಪಡಿಸಿದ್ದಾಳೆ. ಮಾತು ನಿಧನವಾಗಿರಲಿ ಎಂದು ಸಹಿತ ಹೇಳಿದ್ದಾಳೆ. ಆದರೆ ರಾಜಕೀಯ ನಾಯಕ ಶೃತಿ ಬಗ್ಗೆ ಹೆಚ್ಚು ಗಮನ ನೀಡದೆ ತನ್ನಪಾಡಿಗೆ ತಾನು ಮಾತನ್ನು ಮುಂದುವರೆಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಾಲಿಕೆ ಶೃತಿ ವಿಮಾನದ ಸಿಬ್ಬಂದಿ ಬಳಿ ದೂರು ನೀಡಲು ಹೋದರೆ ಆತ ಆಂಧ್ರ ಪ್ರದೇಶದ ಪ್ರಸಿದ್ಧ ರಾಜಕೀಯ ನಾಯಕ ಎಂದು ತಿಳಿದು ಏನು ಮಾಡಲಾಗದೆ ಆತನ ಮಾತುಗಳನ್ನು ಕೇಳುತ್ತಾ ಪ್ರಯಾಣ ಮಾಡಬೇಕಾಯ್ತಂತೆ. ಪಾಪ ಶೃತಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments