Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್‌ಗೆ ಲಘು ಹೃದಯಾಘಾತ: ಚೇತರಿಕೆ

ಶಿವರಾಜ್ ಕುಮಾರ್‌ಗೆ ಲಘು ಹೃದಯಾಘಾತ: ಚೇತರಿಕೆ
, ಬುಧವಾರ, 7 ಅಕ್ಟೋಬರ್ 2015 (11:01 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ನಿನ್ನೆ ಬೆಳಗ್ಗೆ ಲಘು ಹೃದಯಾಘಾತವಾಗಿದೆ. ಜಿಮ್ ನಲ್ಲಿ ವರ್ಕೌಟ್ ಮಾಡಿ ಮನೆಗೆ ಬಂದಿದ್ದ ಶಿವಣ್ಣ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಅವರನ್ನು ಪತ್ನಿ ಗೀತಾ ಶಿವರಾಜ್ ಕುಮಾರ್ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಲ್ಯ ಆಸ್ಪತ್ರೆಗೆ ದಾಖಲಿಸಲಾಯ್ತು.
ಇನ್ನು ಶಿವಣ್ಣ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಅಭಿಮಾನಿಗಳು ಆಸ್ಪತ್ರೆಯ ಬಳಿ ಜಮಾಯಿಸಿದ್ದರು. ಇನ್ನು ಸಿನಿಮಾ ರಂಗದ ಅನೇಕರು ಕೂಡ ಶಿವಣ್ಣರನ್ನು ನೋಡದಕ್ಕೆ ಆಸ್ಪತ್ರೆಗೆ ಆಗಮಿಸಿದ್ದರು, ರಕ್ಷಿತಾ, ಪ್ರೇಮ್, ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಕುಮಾರ್ ಸೇರಿದಂತೆ ಹಲವು ಆಗಮಿಸಿದ್ದರು. ಆದ್ರೆ ಸಂಜೆ 4 ಗಂಟೆ ಶಿವರಾಜ್ ಕುಮಾರ್ ಅವರನ್ನು ವಾರ್ಡ್ ಗೆ ಶಿಪ್ಟ್ ಮಾಡಲಾಯತ್. ವೈದ್ಯರು ಆತಂಕ ಪಡೋ ಅಗತ್ಯ ಇಲ್ಲ ಎಂದು ತಿಳಿಸಿದ್ರು. ಬಳಿಕ ಸ್ವತಃ ಶಿವಣ್ಣ ಅವರೇ ಆಸ್ಪತ್ರೆಯ ಕಿಟಿಕಿಯ ಬಳಿ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿದ್ರು. ಆತಂಕ ಪಡೋ ಅಗತ್ಯವಿಲ್ಲ ನಾನು ಆರಾಮಾಗಿದ್ದೇನೆ ಎಂದರು.
 
ಸದ್ಯ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಶಿವಣ್ಣ ಇನ್ನು ಕೆಲ ದಿನಗಳ ಕಾಲ ಶೂಟಿಂಗ್ ನಿಂದ ವಿರಾಮ ಪಡೆಯಲಿದ್ದಾರೆ.

Share this Story:

Follow Webdunia kannada