ಪತ್ನಿ ಗೀತಾ ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಶಿವರಾಜ್ ಕುಮಾರ್

Webdunia
ಮಂಗಳವಾರ, 16 ಮಾರ್ಚ್ 2021 (09:34 IST)
ಬೆಂಗಳೂರು: ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.


ಆದರೆ ಈ ಭೇಟಿ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯಿಸಿದಾಗ ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಕೆಲವು ವೈಯಕ್ತಿಕ ಕಾರಣಗಳನ್ನು ಚರ್ಚೆ ಮಾಡಲು ಶಿವರಾಜ್ ಕುಮಾರ್ ಮನೆಗೆ ಬಂದಿದ್ದರು. ಅದರ ವಿವರಗಳನ್ನು ಹೇಳಲಾಗದು ಎಂದು ಡಿಕೆಶಿ ಹೇಳಿದ್ದಾರೆ.

ಇನ್ನೊಂದೆಡೆ, ಶಿವರಾಜ್ ಕುಮಾರ್ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಮಧು ಯಾವ ಪಕ್ಷಕ್ಕಾದರೂ ಸೇರಿಕೊಳ್ಳಲಿ. ಅದರ ಬಗ್ಗೆ ನಾನೇನು ಹೇಳಲ್ಲ. ಒಟ್ನಲ್ಲಿ ಒಳ್ಳೆಯದಾದರೆ ಸಾಕು ಎಂದಷ್ಟೇ ಹೇಳಿದ್ದಾರೆ. ಇನ್ನು, ಕೆಲವು ವೈಯಕ್ತಿಕ ವಿಚಾರಗಳಿದ್ದವು. ಅದನ್ನು ಚರ್ಚೆ ಮಾಡಲು ಡಿಕೆಶಿ ಭೇಟಿ ಮಾಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ. ಆದರೆ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೇ ಇವರಿಬ್ಬರ ಭೇಟಿ ನಡೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನೆರವೇರಿದ ಬೇಡಿಕೆ: ಕೊರಗಜ್ಜನಿಗೆ ಕೋಲ ಸಲ್ಲಿಸಿದ ರಚಿತಾ ರಾಮ್, Video

ನಾನು ವಿಚ್ಛೇದನ ಪಡೆಯುವವರೆಗೂ ನನ್ನ ಚಿತ್ರಗಳು ತೆರೆಮೇಲೆ ಬಿಡುಗಡೆಯಾಗುವುದಿಲ್ಲ: ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ನಟ ರವಿ ಮೋಹನ್

ಆರ್‌ಸಿಬಿ ಆಟಗಾರ ದೇವದತ್‌ ಪಡಿಕ್ಕಲ್ ಜತೆ ನಟಿ ಶೆಹನಾಜ್ ಗಿಲ್ ಡೇಟಿಂಗ್

ಅಯೋಧ್ಯೆಯಲ್ಲಿ ₹3.31ಕೋಟಿಯ ಭೂಮಿ ಖರೀದಿಸಿದ ನಟ ರಣಬೀರ್ ಕಪೂರ್

ರಜನಿಕಾಂತ್‌ ಅಭಿನಯದ ಜೈಲರ್ 2 ಸೆಟ್‌ನಲ್ಲಿ ದುರ್ಘಟನೆ: ವಿದ್ಯುತ್ ಶಾಕ್‌ ತಗಲಿ ತಂತ್ರಜ್ಞ ಸಾವು

ಮುಂದಿನ ಸುದ್ದಿ
Show comments