ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಈಗ ತಮ್ಮ ಮಗಳ ಮದ್ವೆ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಮದ್ವೆ ದಿನ ಹತ್ರ ಬರ್ತಾ ಇದ್ದಂತೆ ಕೆಲಸ ಕಾರ್ಯಗಳು ಹೆಚ್ಚಾಗ್ತಾ ಹೋಗುತ್ವೆ. ಅದರಂತೆ ಶಿವಣ್ಣ ತಮ್ಮ ಮಗಳ ಅದ್ದೂರಿ ಮದ್ವೆಗೆ ಚಿತ್ರರಂಗದ ಗಣ್ಯರು ಸೇರಿದಂತೆ ಸಂಬಂಧಿಕರಿಗೆ ಆಹ್ವಾನ ನೀಡುವಲ್ಲಿ ಬ್ಯೂಸಿಯಾಗಿದ್ದಾರೆ. ಶಿವಣ್ಣ ಈಗ ಗಾಜನೂರಿಗೆ ತೆರಳಿದ್ದಾರೆ. ಅಲ್ಲಿರೋ ಬಂದು ಬಳಗದವರಿಗೂ ಮದ್ವೆ ಶುಭ ಸಮಾರಂಭಕ್ಕೆ ಆಮಂತ್ರಣ ನೀಡಲು ಹೋಗಿದ್ದಾರೆ.
ಇದೇ ತಿಂಗಳ 30-31 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಗಿ ಮದುವೆ ನಡೆಯಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮಗಳು ಡಾ. ನಿರುಪಮಾ ಮದುವೆಯನ್ನ ಇದೇ ಮೊದಲ ಬಾರಿಗೆ ಇಷ್ಟೋಂದು ಗ್ರ್ಯಾಂಡ್ ಆಗಿ ಏರ್ಪಡಿಸಲಾಗಿದೆ. ಈಗಾಗ್ಲೆ ನಿರುಪಮಾ ವಿವಾಹದ ಇನ್ವಿಟೇಶನ್ ಕಾರ್ಡ್ ಎಲ್ಲ ಗಣ್ಯರಿಗೂ ತಲುಪಿದೆ. ಈಗ ಸಂಬಂಧಿಕರಿಗೆ ಆಹ್ವಾನ ಕೊಡಲು ಶಿವಣ್ಣ ಮುಂದಾಗಿದ್ದಾರೆ. ಶಿವಣ್ಣ ತಮ್ಮ ತಂದೆಯ ಊರಾದ ಗಾಜನೂರಿಗೆ ಹೋಗಿ ಸಂಬಂಧಿಕರು ಸೇರಿದಂತೆ ಗಾಜನೂರಿನ ಗ್ರಾಮಸ್ಥರಿಗೂ ಶಿವಣ್ಣ ಆಹ್ವಾನ ಕೊಟ್ಟಿದ್ದಾರೆ.
ಇನ್ನು ಗೀತಾ ಶಿವರಾಜ್ಕುಮಾರ್ ಹಾಗೂ ವಿನಯ್ ರಾಜ್ಕುಮಾರ್ ಕೂಡ ಶಿವಣ್ಣನಿಗೆ ಸಾಥ್ ಕೊಟ್ಟಿದ್ರು. ಇನ್ನು ಶಿವರಾಜ್ಕುಮಾರ್ ಊರಿಗೆ ಬರ್ತಾರೆ ಅಂದಾಗ ಊರಿನವರ ಸಡಗರ ಮುಗಿಲು ಮುಟ್ಟಿತ್ತು. ಮನೆ ಮಗನ ಆಗಮನದಿಂದಾಗಿ ಗಾಜನೂರು ಸಿಂಗಾರಗೊಂಡಿತ್ತು. ಆಹ್ವಾನ ಕೊಡಲು ಬಂದಾಗ ಮಾಡೋ ಶಾಸ್ತ್ರವನ್ನು ಊರಿನ ಜನ ಮಾಡಿದ್ದಾರೆ. ಮಗಳು ನಿರುಪಮಾ ಮದ್ವೆಗಾಗಿ ಗಾಜನೂರು ತಯಾರಿ ನಡೆಸಿದೆ. ಊರಿಗೆ ಊರೇ ಅಣ್ಣಾವ್ರ ನೆನಪು ಮಾಡಿಕೊಂಡು ಮದ್ವೆ ಸಂಭ್ರಮದಲ್ಲಿ ಖುಷಿಯಾಗಿದೆ.