Webdunia - Bharat's app for daily news and videos

Install App

ಬೆಳ್ಳಿಯಲ್ಲಿ ಮಚ್ಚು ಹಿಡಿದು ಹುಚ್ಚರಾದ ಶಿವಣ್ಣ

Webdunia
ಗುರುವಾರ, 30 ಅಕ್ಟೋಬರ್ 2014 (10:02 IST)
ಸೆಂಚುರಿ ಸ್ಟಾರ್  ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಹೊಚ್ಚ ಹೊಸ ಚಿತ್ರ ಬೆಳ್ಳಿ. ಇದರಲ್ಲಿ ಅವರು ಹುಚ್ಚನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಕಥೆಯನ್ನು ನಿರ್ದೇಶಕ ಮಹೇಶ್ ಹೇಳಿದಾಗ ಸಿಕ್ಕಾಪಟ್ಟೆ ಥ್ರಿಲ್ ಆದರಂತೆ. ಏಕೆಂದರೆ ಶಿವಣ್ಣ ಮೊಟ್ಟ ಮೊದಲ ಬಾರಿಗೆ ಆ ರೀತಿಯ ಪಾತ್ರ ಮಾಡುತ್ತಿದ್ದಾರೆ. ಮಹೇಶ್ ಅವರು ನೈಜ ಬದುಕಲ್ಲಿ ಕಂಡ ಪುಡಿ ರೌಡಿ ಒಬ್ಬನ ಕಥೆ ಇದಾಗಿದ್ದು, ಆತ ಹುಚ್ಚನಾಗಿದ್ದಾಗ ಇಂತಹ ಒಂದು ಪಾತ್ರವನ್ನು ಸೃಷ್ಟಿ ಮಾಡಿ ಅದನ್ನು ಶಿವಣ್ಣ ಬಳಿ ಹೇಳಿದರಂತೆ. 

ಆ ಕಥೆ ಕೇಳಿದಾಗ ಶಿವಣ್ಣನಿಗೆ ಸಕತ್ ಇಷ್ಟ ಆಯ್ತಂತೆ. ಮುಖ್ಯವಾಗಿ ಇಲ್ಲಿ ರೌಡಿಸಂನಿಂದ ಹುಚ್ಚನಾಗುವುದಿಲ್ಲ ಹೀರೋ. ಬದಲಿಗೆ ಆತ ಪ್ರೀತಿಯ ಕಾರಣದಿಂದ ಹುಚ್ಚನಾಗುತ್ತಾನಂತೆ. ಸಾಮಾನ್ಯವಾಗಿ ಚಿತ್ರದಲ್ಲಿ ಹುಚ್ಚನ ಪಾತ್ರಧಾರಿ ಆಗಿರುವ ಕಲಾವಿದರು ಯಶಸ್ವಿ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. 
 
ಈವರೆಗೂ ತಾನು ಈ ರೀತಿಯ ಪಾತ್ರ ಮಾಡೇ ಇರಲಿಲ್ಲ. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡೆ ಎಂದು ಹೇಳಿರುವ ಶಿವಣ್ಣ ಬೆಳ್ಳಿ ಚಿತ್ರದ ಒನ್ ಲೈನ್ ಸ್ಟೋರಿ ಹೇಳಿದ್ದಾರೆ ತಮ್ಮ ಅಭಿನಯದ ಬಗ್ಗೆ. ಈ ಚಿತ್ರ ನಾಳೆ ಬಿಡುಗಡೆ ಆಗಲಿದೆ. ಕೃತಿ ಕರಬಂಧ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಜನರು ತಮ್ಮ ಪಾತ್ರವನ್ನು ಯಾವರೀತಿ  ಸ್ವೀಕರಿಸುತ್ತಾರೋ ಎನ್ನುವ ಕುತೂಹಲ ಹೊಂದಿದ್ದಾರೆ ಶಿವಣ್ಣ. ನಿರ್ದೇಶಕರ ನಟ ಎನ್ನುವ ಅಗ್ಗಳಿಕೆ ಪಡೆದಿರುವ ಶಿವರಾಜ್ ಕುಮಾರ್ ಅವರ ಈ ಸಾಹಸವು ಯಶ ಪಡೆಯಲಿ  ಎನ್ನುವ ಹಾರೈಕೆ ವೆಬ್ ದುನಿಯಾದ್ದಾಗಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments