Select Your Language

Notifications

webdunia
webdunia
webdunia
webdunia

ಡಾ. ಶಿವರಾಜ್ ಕುಮಾರ್ ನಟಿಸಿದ ಬೆಳ್ಳಿ ಇಂದು ರಾಜ್ಯಾದ್ಯಂತ ತೆರೆಗೆ

ಡಾ. ಶಿವರಾಜ್ ಕುಮಾರ್ ನಟಿಸಿದ ಬೆಳ್ಳಿ ಇಂದು ರಾಜ್ಯಾದ್ಯಂತ ತೆರೆಗೆ
, ಶುಕ್ರವಾರ, 31 ಅಕ್ಟೋಬರ್ 2014 (13:06 IST)
ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ಬೆಳ್ಳಿ ಇಂದು ತೆರೆ ಕಾಣುತ್ತಿದೆ. ಕೃತಿ ಕರಬಂಧ, ಶಿವರಾಜ್ ಕುಮಾರ್ ಅವರ ಅಭಿನಯದ ಬೆಳ್ಳಿ ಚಿತ್ರವೂ ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. 
 
ಯಶಸ್ವಿನಿ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಹೆಚ್ .ಆರ್. ರಾಜೇಶ್ ಅವರು ನಿರ್ಮಿಸಿರುವ ಈ ಚಿತ್ರವನ್ನು ಮುಸ್ಸಂಜೆ ಮಹೇಶ್  ನಿರ್ದೇಶಿಸಿದ್ದಾರೆ. ಕಥೆ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಮಹೇಶ್ ಅವರೇ ಹೊತ್ತಿದ್ದಾರೆ. 
 
ವಿ. ಶ್ರೀಧರ್ ಸಂಗೀತ ಹೊಂದಿದೆ.ಕೆ ಎಸ್ ಚಂದ್ರ ಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಗಣೇಶ್ ಅವರ ಸಾಹಸ ನಿರ್ದೇಶನ ಹೊಂದಿರುವ ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ಕೃತಿ ಕರಬಂಧ, ವಿನೋದ್ ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ ಪ್ರಸಾದ್, ಆದಿ ಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧ, ಶ್ರೀನಿವಾಸ ಮೂರ್ತಿ, ರಮೇಶ್ ಭಟ್, ಹರೀಶ್ ರೈ ಮುಂತಾದವರು ನಟಿಸಿದ್ದಾರೆ. 
 
ಈ ಮೊದಲು ನಾವು ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಹುಚ್ಚನ ಪಾತ್ರದಲ್ಲಿ ಕಂಡು ಬರುತ್ತಿದ್ದಾರೆ ಎಂದು ಹೇಳಿದ್ದೆವು. ಇದರ ಹೀರೋಯಿನ್ ಕೃತಿ ಬೆಳ್ಳಿ ಮೂಲಕ ಮೊದಲ ಬಾರಿಗೆ ಶಿವಣ್ಣ ಜೊತೆ ನಟಿಸುತ್ತಿದ್ದಾಳೆ. ಇದುವರೆಗೂ ನಟಿಸಿರುವ ಪಾತ್ರಗಳಿಗಿಂತ ತುಂಬಾ ಬಿನ್ನವಾಗಿದೆ ಎಂದು ಹೇಳಿದ್ದಾರೆ ಕೃತಿ. ಈವರೆಗೂ ಕಾಲೇಜ್ ಹುಡುಗಿಯಾಗಿ ಎಲ್ಲರ ಮುಂದೆ ಬರುತ್ತಿದ್ದೆ, ಆದರೆ ಈ ಚಿತ್ರದಲ್ಲಿ ಭಿನ್ನ ಪತ್ರ ಸಿಕ್ಕಿದೆ ಎಂದು ಹೇಳಿರುವ ಈ ತಾರೆ ಆ ಪಾತ್ರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಿನಿಮಾದ ಸ್ಕ್ರಿಪ್ಟ್ ಓದಿದಾಗ ತಾನು ಇದರಲ್ಲಿ ನಟಿಸಲೇ ಬೇಕು ಎಂದೆನಿಸಿತಂತೆ ಆಕೆಗೆ. ತನ್ನ ತಾರಾ ಬದುಕಿಗೆ ಇದು ತಿರುವನ್ನು ನೀಡುತ್ತದೆ ಎಂದು ಅನ್ನಿಸಿತಂತೆ. 
 
ಭೂಗತ ಲೋಕದ ಕತೆಗಿಂತ ಭಿನ್ನವಾಗಿದೆಯಂತೆ ಇದರಲ್ಲಿರುವ ಕಥೆ. ಹೀಗೆ ಅನೇಕ ಕುತೂಹಲಗಳನ್ನು ಉಂಟು ಮಾಡಿರುವ ಸಿನಿಮಾದ ಬಗ್ಗೆ ಪ್ರೇಕ್ಷಕರು ಸಹಿತ ಕಾಯುತ್ತಿದ್ದಾರೆ, ಇಂದು ಅವರನ್ನು ಮನರಂಜಿಸಲು ಶಿವಣ್ಣ   ಬರುತ್ತಿದ್ದಾರೆ.
 

Share this Story:

Follow Webdunia kannada