Select Your Language

Notifications

webdunia
webdunia
webdunia
webdunia

'ಬುಲೆಟ್ ಬಸ್ಯಾ'ಲ್ಲಿ ಮೀಸೆ ಬಿಟ್ಟ ಶರಣ್

'ಬುಲೆಟ್ ಬಸ್ಯಾ'ಲ್ಲಿ ಮೀಸೆ ಬಿಟ್ಟ ಶರಣ್
, ಬುಧವಾರ, 29 ಏಪ್ರಿಲ್ 2015 (10:09 IST)
ಬುಲೆಟ್ ಬಸ್ಯಾ ಚಿತ್ರದಲ್ಲಿ ನಟ ಶರಣ್ ಅವರು ಮೀಸೆ ಬಿಟ್ಟಿದ್ದಾರೆ. ಅವರು ಆ ಹಳ್ಳಿಯಲ್ಲಿ ದಿಲ್ ದಾರ  ಮನುಷ್ಯ, ವಿಜಯ್ ಮಲ್ಯರಂತೆ! ಆತನ ಜೊತೆಗಾತಿ ಆಗಿದ್ದಾಳೆ ಹರಿಪ್ರಿಯಾ. ಇದು ಬುಲೆಟ್ ಬಸ್ಯಾ ಚಿತ್ರದ ಕಥೆ.  
ಎಲ್ಲಾ ಪ್ರೇಮ ಕಥೆ ಇರುವಂತೆ ಇಲ್ಲೂ ಸಹಿತ ಹರಿಪ್ರಿಯ ಮತ್ತು ಶರಣ ನಡುವೆ ಜಗಳವಾಗಿ ಆ ಬಳಿಕ ಇಬ್ಬರು ಪ್ರೀತಿಸುತ್ತಾರೆ. ಬುಲೆಟ್ ಬಸ್ಯಾ ಚಿತ್ರದಲ್ಲಿ ಯತಿರಾಜ್, ಆದಿ, ಗಿರಿ, ಪ್ರಶಾಂತ್, ಸಿದ್ದಿ, ತನ್ವೀರ್ ಮುಂತಾದವರು ಈತನ ದೋಸ್ತಿಗಳು.  
 
ಇವರು ಬಸ್ಯಾ ಬ್ಯಾಂಡ್ ನಲ್ಲಿದ್ದಾರೆ. ಈ ಚಿತ್ರದ ಅತ್ಯಂತ ಆಸಕ್ತಿಕರ ಹಾಡನ್ನು ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡಲಾಯಿತು. ತಾನು ಮೊದಲು ನಟಿಸಿದ್ದ ಪಾತ್ರಗಳಿಗಿಂತ ಇದು ಭಿನ್ನವಾಗಿದೆ ಎನ್ನುವ ಮಾತನ್ನು ಶರಣ್ ಅವರು ಹೇಳಿದ್ದಾರೆ. 
 
ರಘು ನಿಡವಳ್ಳಿ ಸಂಭಾಷಣೆ ಹಾಗೂ ಒಂದು ಹಾಡನ್ನು ಬರೆದಿದ್ದಾರೆ. ಯೋಗರಾಜ್ ಭಟ್, ಡಾ. ನಾಗೇಂದ್ರ ಪ್ರಸಾದ್, ಕವಿರಾಜ್ ಒಂದೊಂದು ಹಾಡನ್ನು ಬರೆದಿದ್ದಾರೆ. ಮಾಸ್ಟರ್ ಆನಂದ್, ಸೃಜನ್ ಲೋಕೇಶ್, ರಂಗಾಯಣ ರಘು ಈ ಚಿತ್ರದ ಉಳಿದ ತಾರಾಗಣ. ಇದನ್ನು ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

Share this Story:

Follow Webdunia kannada