Webdunia - Bharat's app for daily news and videos

Install App

ವಜ್ರಕಾಯದಲ್ಲಿ ನಾಯಕ ನಟ ಶರಣ್ ಗಾನ ಸುಧೆ...?!

Webdunia
ಗುರುವಾರ, 5 ಮಾರ್ಚ್ 2015 (10:02 IST)
ಮಧ್ಯಾನ್ಹದ ಕನಸಲ್ಲಿ ಎಂದು ರಾಜರಾಜೇಂದ್ರ ಚಿತದಲ್ಲಿ ನಟ ಶರಣ್ ಹಾಡಿದ್ದರು. ನೂರನೇ ಚಿತ್ರದ ಮೂಲಕ ನಾಯಕರಾದ ಕಾಮಿಡಿ ನಟ ಈಗ ಕಾಮಿಡಿ ನಾಯಕರಾಗಿ ಕನ್ನಡ ಚಿತ್ರಪ್ರೇಮಿಗಳನ್ನು ಆಕರ್ಷಿಸುತ್ತಿದ್ದಾರೆ. ಮಂಜುಳಾ ಗುರುರಾಜ್ ಅವರ ಜೊತೆ ಹಾಡಿದ್ದ ಶರಣ್ ಅವರ ಈ ಹಾಡು ಟೀವಿ ಹಾಗೂ ಎಫ್ ಎಂ ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು ಸುಳ್ಳಲ್ಲ. ಅಲ್ಲದೆ ಈಗ ಸಹಿತ ಆ ಹಾಡಿಗೆ ಅತಿ ಹೆಚ್ಚಿನ ಬೇಡಿಕೆ ಇದೆ.
ಶರಣ್ ಧ್ವನಿ ಈಗ ಹಣ ಮಾಡುವ ಸಾಧನವಾಗಿ ಬದಲಾಗಿದೆ ಸಿನಿಮಾ ಮಂದಿಗೆ. ಕೊರಿಯಾಗ್ರಾಫರ್-ನಿರ್ದೇಶಕ ಹರ್ಷ ಅವರು ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಚಿತ್ರ ವಜ್ರಕಾಯದಲ್ಲಿ ಶರಣ್ ಅವರ ಕೈಲಿ ಹಾಡಿಸುತ್ತಿದ್ದಾರೆ. ಈಗಾಗಲೇ ಅನೇಕ ಹೊಸತನಗಳನ್ನು ಹೊಂದಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತ ಮೇರು ನಟರು ಬಂದು ಶಿವಣ್ಣನ ಜೊತೆ ಡ್ಯಾನ್ಸ್ ಮಾಡಿ ಆಗಿದೆ. ಅದಾದ ಬಳಿಕ ತಮಿಳು ಸ್ಟಾರ್ ಹೀರೋ ಧನುಷ್ ಅವರು ಸಹ ಹಾಡಿದ್ದಾರೆ, ಈಗ ಶರಣ್ ಈ ಚಿತ್ರದಲ್ಲಿ ಹಾಡುತ್ತಿದ್ದಾರೆ. ಇದನ್ನು ಡಾ. ಮನೋಹರ್ ಅವರು ನಿರ್ಮಾಣ  ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದಲ್ಲಿ ಮಾರ್ಚ್ 8 ರಂದು ಶರಣ್ ಹಾಡಲಿದ್ದಾರೆ. ಈ ಚಿತ್ರದ ಹಾಡುಗಳು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆ ಆಗಲಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments