Webdunia - Bharat's app for daily news and videos

Install App

ಮತ್ತೆ ಬಂದ ವೀರಪ್ಪನ್ ಚಿತ್ರದಲ್ಲಿ ಶಂಕರ್ ಬಿದರಿ ಅಭಿನಯ

Webdunia
ಶುಕ್ರವಾರ, 31 ಜುಲೈ 2015 (10:42 IST)
ಈಗ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನದ ಚಿತ್ರ ಕಿಲ್ಲಿಂಗ್ ವೀರಪ್ಪನ್ ಹವಾ ಸಾಗಿದೆ. ಡಾ. ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ ಈ ಚಿತ್ರದಲ್ಲಿ. ವೀರಪ್ಪನ್ ಅವರು ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರನ್ನು 108ದಿನಗಳ ಕಾಲ ಬಂಧಿಸಿ ಬಿಡುಗಡೆ ಮಾಡಿದ್ದು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಈಗ ನಾವು ಹೇಳ ಹೊರಟಿರುವುದು ಆ ಚಿತ್ರದ ಕಥೆಯಲ್ಲ. ಬದಲಿಗೆ ಅದೇ ರೀತಿಯ ಕಥೆಯನ್ನು ಹೊಂದಿರುವ ಮತ್ತೆ ಬಂದ ವೀರಪ್ಪನ್ ಸಿನಿಮಾ ಬಗ್ಗೆ.  ಓಂಕಾರ್ ಅಲಿಯಾಸ್ ಪುರುಷೋತ್ತಮ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ನಟಿಸುತ್ತಿದ್ದಾರೆ. 
ಸುಮಾರು 20ವರ್ಷಗಳ ನಿರಂತರವಾದ ಬೇಟೆಯ ನಂತರ ವೀರಪ್ಪನ್ ಕರ್ನಾಟಕದ ಪೊಲೀಸರ ಕೈಗೆ ಸಿಕ್ಕು ಹತನಾದ. ಆ ಸಮಯದಲ್ಲಿ ಶಂಕರ್ ಬಿದರಿ ಅಧಿಕಾರದಲ್ಲಿದ್ದರು.  ನಿವೃತ್ತ ಅಧಿಕಾರಿ ಈ ಚಿತ್ರದಲ್ಲಿ ಡಿಐಜಿ ಆಗಿ ನಟಿಸುತ್ತಿದ್ದಾರೆ. 
 
ಕೇವಲ ಕೆಲವು ನಿಮಿಷಗಳು ಮಾತ್ರ ಅವರ ಪಾತ್ರ ತೆರೆಯ ಮೇಲೆ ಬರುತ್ತದೆ. ಈ ಚಿತ್ರದಲ್ಲಿ ಹೆಚ್ ವಿ ಅಣ್ಣಪ್ಪ ವೀರಪ್ಪನ್ ಪಾತ್ರಧಾರಿಯಾಗಿದ್ದಾರೆ. ಚಿತ್ರತಂಡ ತಮ್ಮ ಬಳಿ ರಿಕ್ವೆಸ್ಟ್ ಮಾಡಿಕೊಂಡದ್ದಕ್ಕೆ ತಾವು ಈ ಚಿತ್ರದಲ್ಲಿ ನಟಿಸಲು ಸಮ್ಮತಿಸಿದ್ದು ಎಂದು ಈ ಸಮಯದಲ್ಲಿ  ಹೇಳಿದ್ದಾರೆ ಮಾಜಿ ಪೊಲೀಸ್ ಅಧಿಕಾರಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments