Select Your Language

Notifications

webdunia
webdunia
webdunia
webdunia

ಮತ್ತೆ ಬಂದ ವೀರಪ್ಪನ್ ಚಿತ್ರದಲ್ಲಿ ಶಂಕರ್ ಬಿದರಿ ಅಭಿನಯ

ಮತ್ತೆ ಬಂದ ವೀರಪ್ಪನ್ ಚಿತ್ರದಲ್ಲಿ ಶಂಕರ್ ಬಿದರಿ ಅಭಿನಯ
, ಶುಕ್ರವಾರ, 31 ಜುಲೈ 2015 (10:42 IST)
ಈಗ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನದ ಚಿತ್ರ ಕಿಲ್ಲಿಂಗ್ ವೀರಪ್ಪನ್ ಹವಾ ಸಾಗಿದೆ. ಡಾ. ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ ಈ ಚಿತ್ರದಲ್ಲಿ. ವೀರಪ್ಪನ್ ಅವರು ಕನ್ನಡದ ಮೇರುನಟ ಡಾ. ರಾಜ್ ಕುಮಾರ್ ಅವರನ್ನು 108ದಿನಗಳ ಕಾಲ ಬಂಧಿಸಿ ಬಿಡುಗಡೆ ಮಾಡಿದ್ದು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಈಗ ನಾವು ಹೇಳ ಹೊರಟಿರುವುದು ಆ ಚಿತ್ರದ ಕಥೆಯಲ್ಲ. ಬದಲಿಗೆ ಅದೇ ರೀತಿಯ ಕಥೆಯನ್ನು ಹೊಂದಿರುವ ಮತ್ತೆ ಬಂದ ವೀರಪ್ಪನ್ ಸಿನಿಮಾ ಬಗ್ಗೆ.  ಓಂಕಾರ್ ಅಲಿಯಾಸ್ ಪುರುಷೋತ್ತಮ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ನಟಿಸುತ್ತಿದ್ದಾರೆ. 
ಸುಮಾರು 20ವರ್ಷಗಳ ನಿರಂತರವಾದ ಬೇಟೆಯ ನಂತರ ವೀರಪ್ಪನ್ ಕರ್ನಾಟಕದ ಪೊಲೀಸರ ಕೈಗೆ ಸಿಕ್ಕು ಹತನಾದ. ಆ ಸಮಯದಲ್ಲಿ ಶಂಕರ್ ಬಿದರಿ ಅಧಿಕಾರದಲ್ಲಿದ್ದರು.  ನಿವೃತ್ತ ಅಧಿಕಾರಿ ಈ ಚಿತ್ರದಲ್ಲಿ ಡಿಐಜಿ ಆಗಿ ನಟಿಸುತ್ತಿದ್ದಾರೆ. 
 
ಕೇವಲ ಕೆಲವು ನಿಮಿಷಗಳು ಮಾತ್ರ ಅವರ ಪಾತ್ರ ತೆರೆಯ ಮೇಲೆ ಬರುತ್ತದೆ. ಈ ಚಿತ್ರದಲ್ಲಿ ಹೆಚ್ ವಿ ಅಣ್ಣಪ್ಪ ವೀರಪ್ಪನ್ ಪಾತ್ರಧಾರಿಯಾಗಿದ್ದಾರೆ. ಚಿತ್ರತಂಡ ತಮ್ಮ ಬಳಿ ರಿಕ್ವೆಸ್ಟ್ ಮಾಡಿಕೊಂಡದ್ದಕ್ಕೆ ತಾವು ಈ ಚಿತ್ರದಲ್ಲಿ ನಟಿಸಲು ಸಮ್ಮತಿಸಿದ್ದು ಎಂದು ಈ ಸಮಯದಲ್ಲಿ  ಹೇಳಿದ್ದಾರೆ ಮಾಜಿ ಪೊಲೀಸ್ ಅಧಿಕಾರಿ.

Share this Story:

Follow Webdunia kannada