ಮಗನ ಮಾನಹಾನಿ: ಸಚಿವೆ ಸುರೇಖಾ ವಿರುದ್ಧ ದೂರು ನೀಡಿದ ನಟ ನಾಗರ್ಜುನ

Sampriya
ಗುರುವಾರ, 3 ಅಕ್ಟೋಬರ್ 2024 (19:02 IST)
Photo Courtesy X
ಹೈದರಾಬಾದ್: ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಬಗ್ಗೆ ಮಾನಹಾನಿಯಾಗುವ ಹೇಳಿಕೆ ನೀಡಿದ ಸಚಿವೆ ಸುರೇಖಾ ವಿರುದ್ಧ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಾಗಾರ್ಜುನ ಅವರು ದೂರು ದಾಖಲಿಸಿದ್ದಾರೆ.

ಸಮಂತಾ-ನಾಗಚೈತನ್ಯ ವಿಚ್ಛೇದನಕ್ಕೂ ಕೆಟಿಆರ್‌ಗೂ ನೇರ ಸಂಬಂಧವಿದೆ ಎಂದು ಕೊಂಡಾ ಸುರೇಖಾ ಬುಧವಾರ ಆರೋಪ ಮಾಡಿದ್ದರು.

ಬುಧವಾರ ಕೊಂಡಾ ಸುರೇಖಾ ಅವರು ಕೆ.ಟಿ.ರಾಮ ರಾವ್‌ ಡ್ರಗ್ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್‌ ಪಾರ್ಟಿ ಆಯೋಜಿಸುತ್ತಿದ್ದರು. ಅವರ ದೌರ್ಜನ್ಯ ಸಹಿಸದೇ ಅನೇಕ ನಟಿಯರು ನಟನೆಯನ್ನೇ ಬಿಟ್ಟಿದ್ದಾರೆ. ಕೆಲವರು ಮದುವೆಯಾಗಿ, ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅದಲ್ಲದೆ ನಾಗಾರ್ಜುನ ಒಡೆತನದ ಎನ್‌ ಕನ್ವೆನ್ಷನ್‌ ಸೆಂಟರ್‌ ನೆಲಸಮಗೊಳಿಸುವುದು ಬೇಡ ಎಂದಾದಲ್ಲಿ, ತನ್ನ ಬಳಿ ಸಮಂತಾ ಅವರನ್ನು ಕಳುಹಿಸುವಂತೆ ರಾಮ ರಾವ್‌, ಬೇಡಿಕೆ ಇಟ್ಟಿದ್ದರು. ರಾಮ ರಾವ್‌ ಬಳಿ ಹೋಗುವಂತೆ ಸಮಂತಾ ಅವರಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಅಕೆ ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯಿತು ಎಂದು ಸಚಿವೆ ಸುರೇಖಾ ಹೇಳಿದ್ದಾರೆ. ಈ ಮಾನಹಾನಿ ಹೇಳಿಕೆಗೆ ಇಡೀ ಚಿತ್ರರಂಗವೇ ಆಕ್ರೋಶ ಹೊರಹಾಕುತ್ತಿದೆ.

ಹೈದರಾಬಾದ್‌ನ ನಾಂಪಲ್ಲಿ ಜಿಲ್ಲೆಯಲ್ಲಿ ಸಲ್ಲಿಸಲಾದ ದೂರಿನಲ್ಲಿ ನಾಗಾರ್ಜುನ ಅವರು ಕಾಂಗ್ರೆಸ್ ನಾಯಕರಿಗೆ ದೂರು ನೀಡಿದ್ದಾರೆ.

"ರಾಜಕೀಯ ಲಾಭ, ಪ್ರಚಾರ ಮತ್ತು  ಕುಟುಂಬದ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಸುಳ್ಳುಗಳನ್ನು ತಿಳಿಸುವ ದುರುದ್ದೇಶಪೂರಿತ  ಈ ಹೇಳಿಕೆಯನ್ನು ಮಾಡಲಾಗಿದೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್‌ಗೆ ಜೀವಾವಧಿ ಕೊಟ್ರು ಓಕೆ, ದರ್ಶನ್ ಪರ ವಕೀಲರ ವಾದ ಹೀಗಿತ್ತು

ಮಾಜಿ ಗೆಳತಿಯ ಮುಖದಲ್ಲಿ ಸದಾ ನಗುವನ್ನು ಬಯಸಿದ ನಟ ಅರ್ಜುನ್ ಕಪೂರ್

BBK12: ಕಳಪೆ ಕೊಟ್ಟಿದ್ದಕ್ಕೆ ದುರಹಂಕಾರ ತೋರಿಸ್ತಿದ್ದಾರಾ ಅಶ್ವಿನಿ ಗೌಡ

ಹಿಟ್ ಆ್ಯಂಡ್ ರನ್ ಕೇಸ್ ಸಂಬಂಧ ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಕಾಂತಾರ ವೀಕ್ಷಿಸಿದ ಅಲ್ಲು ಅರ್ಜುನ್, ಸಿನಿಮಾ ಬಗ್ಗೆ ಹೀಗೆ ಬರೆದಿದ್ದಾರೆ

ಮುಂದಿನ ಸುದ್ದಿ
Show comments