Select Your Language

Notifications

webdunia
webdunia
webdunia
webdunia

ಖಳನಟರನ್ನು ಗುರುತಿಸಿ ಅವರಿಗೂ ಮನ್ನಣೆ ನೀಡಿ: ದರ್ಶನ್

ಖಳನಟರನ್ನು ಗುರುತಿಸಿ ಅವರಿಗೂ ಮನ್ನಣೆ ನೀಡಿ: ದರ್ಶನ್
, ಮಂಗಳವಾರ, 3 ಮಾರ್ಚ್ 2015 (10:23 IST)
ಮೈಸೂರು ನಗರದಲ್ಲಿ ಶನಿವಾರ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಉತ್ತಮ ನಟ ಪ್ರಶಸ್ತಿ ದೊರಕಿತು. ಈ ಸಮಯದಲ್ಲಿ ಅವರು ಹಿಂದಿನ ಎಲ್ಲ ಖಳನಟರು ಎಲೆಮರೆಯ ಕಾಯಿ ಎಂದು ಈ ಸಮಯದಲ್ಲಿ ಬಣ್ಣಿಸಿದರು. 
ತನ್ನ ತಂದೆ ತೂಗುದೀಪ ಶ್ರೀನಿವಾಸ್, ದಿನೇಶ್, ಟೈಗರ್ ಪ್ರಭಾಕರ್ ಅಲ್ಲದೆ ಇನ್ನು ಉಳಿದ ಅನೇಕ ಖಳನಾಯಕರ ಹೆಸರುಗಳನ್ನು ನೆನಪಿಸಿಕೊಂಡರು. ಈ ಸಮಯದಲ್ಲಿ ದರ್ಶನ್ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ಅವರ ಬಳಿ ಅತ್ಯುತ್ತಮ ಖಳನಾಯಕ ಪ್ರಶಸ್ತಿಯನ್ನು ಪ್ರದಾನ ಮಾಡ ಬೇಕು ಎನ್ನುವ ಭಿನ್ನಹ ಇಟ್ಟರು.ಆ ಸಮಯದಲ್ಲಿ ತಕ್ಷಣವೇ ಸಿದ್ಧರಾಮಯ್ಯ ಅವರು ಸಹಿತ ಮುಂದಿನ ವರ್ಷದಿಂದ ಅತ್ಯುತ್ತಮ ಖಳನಾಯಕ ಪ್ರಶಸ್ತಿ ನೀಡುವುದಾಗಿ ಹೇಳಿದರು. 
 
ನಾನು ಬಹಳ ಕೃತಜ್ಞನಾಗಿದ್ದೇನೆ ನನ್ನ ಭಿನ್ನಹ ಮನ್ನಿಸಿ ಅದನ್ನು ಈ ವೇದಿಕೆಯ ಹೇಳಿದ್ದಕ್ಕೆ ಅನೇಕ ಖಳನಾಯಕರು ಈ ಚಿತ್ರರಂಗದ ತೆರೆಮರೆಯ ಹೀರೋಗಳಾಗಿದ್ದಾರೆ. ಆದರೆ ಅವರಿಗೆ ಸಲ್ಲಬೇಕಾದ ಪುರಸ್ಕಾರ, ಮನ್ನಣೆ ಸಿಕ್ಕಿಲ್ಲ. ಅವರ ಕೆಲಸದ ಬಗ್ಗೆ ಯಾರೂ ಗಮನಿಸಿಲ್ಲ, ಖಳನಟನ ಮಗನಾಗಿ ಇದನ್ನು ನಾನು ಮನಗಂಡಿದ್ದೇನೆ. ನಾಲ್ಕು ವಿಲನ್‌ಗಳನ್ನು ಹೊಡೆದಾಗ ಮಾತ್ರ  ಹೀರೋಗೆ ಬೆಲೆ. ಇಲ್ಲದೆ ಇದ್ದಲ್ಲಿ ನನ್ನ  ಪಾತ್ರ ಅಪೂರ್ಣ. ನನ್ನ ಮನವಿ ಮಾನ್ಯ ಮಾಡಿದ್ದಕ್ಕೆ, ಅವರ ಶ್ರಮ ಗುರುತಿಸಿದ್ದಕ್ಕೆ  ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಈ ಸಮಯದಲ್ಲಿ ಹೇಳಿದರು. 

Share this Story:

Follow Webdunia kannada