Select Your Language

Notifications

webdunia
webdunia
webdunia
webdunia

ಸುದೀಪ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸಂಯುಕ್ತ ಹೊರನಾಡ್ ಆಯ್ಕೆ

ಸುದೀಪ್ ನಿರ್ಮಿಸುತ್ತಿರುವ ಚಿತ್ರಕ್ಕೆ ಸಂಯುಕ್ತ ಹೊರನಾಡ್ ಆಯ್ಕೆ
, ಮಂಗಳವಾರ, 30 ಜೂನ್ 2015 (10:27 IST)
ಜಿಗರ್ಥಂದ ಎನ್ನುವ ತಮಿಳು ಚಿತ್ರ 2014  ರಲ್ಲಿ ಬಿಡುಗಡೆ ಆಗಿತ್ತು. ಅದು ಕಾಮಿಡಿ ಕ್ರೈಮ್ ಕಥೆಯನ್ನು ಹೊಂದಿತ್ತು. ಆ ಚಿತ್ರದಲ್ಲಿ ಸಿದ್ಧಾರ್ಥ್   ಮುಖ್ಯ ಪಾತ್ರಧಾರಿಯಾಗಿದ್ದರು. ಅವರ ಜೊತೆ ಬಾಬಿ ಸಿಂಹ ಮತ್ತು ಲಕ್ಷ್ಮಿ ಮೆನನ್ ಅವರು ನಟಿಸಿದ್ದರು. ಅಲ್ಲದೆ ನಿಸಾರ್ ಅಂಬಿಕ, ಕರುಣಾಕರನ್ ಮುಂತಾದವರು ನಟಿಸಿದ್ದ ಈ ಚಿತ್ರ ಕಳೆದ ವರ್ಷ ಕಾಲಿವುಡ್ ಚಿತ್ರರಂಗದ ಯಶಸ್ವಿ ಚಿತ್ರಗಳ ಸಾಲಿಗೆ ಸೇರ್ಪಡೆ ಆಗಿತ್ತು. ಇದನ್ನು  ಕಥಿರೆಸನ್ ಫಿಲಂ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿತ್ತು.  ಈಗ ಈ ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. 
ಈ ಚಿತ್ರದಲ್ಲಿ ರಾಹುಲ್ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಅಂದರೆ ಮೂಲ ಚಿತ್ರದಲ್ಲಿ ಸಿದ್ಧಾರ್ಥ್ ಮಾಡಿದ್ಫಾ ಪಾತ್ರವಾಗಿದೆ. ಪಿ ರವಿಶಂಕರ್ ಇದರಲ್ಲಿ  ಖಳನಾಯಕರಾಗಿದ್ದಾರಂತೆ. ಬಾಬಿ ಸಿಂಹ ಮೂಲ ಚಿತ್ರದಲ್ಲಿ ನಟಿಸಿದ ಪಾತ್ರದಲ್ಲಿ ಕಂಡು ಬರುತ್ತಿದ್ದಾರೆ. ಆದರೆ ಹೀರೋಯಿನ್ ಜಾಗಕ್ಕೆ ಲಕ್ಷ್ಮಿ ಮೆನನ್ ಬದಲಿಗೆ  ಸಂಯುಕ್ತ ಹೊರನಾಡ್ ಅವ್ರು ಆಯ್ಕೆಯಾಗಿದ್ದಾರೆ. ಮೂಲ ಚಿತ್ರದಲ್ಲಿ ಬಾಬಿ ಸಿಂಹ ತಮ್ಮ ಪಾತ್ರಕ್ಕೆ ಫಿಲಂ ಫೇರ್ ಅವಾರ್ಡ್ ಸಹಿತ ಪಡೆದಿದ್ದಾರೆ. ಈ ಚಿತ್ರವನ್ನು ಸುದೀಪ್ ಅವರ ನಿರ್ಮಾಣ ಸಂಸ್ಥೆಯಿಂದ ಸಿದ್ಧವಾಗುತ್ತಿದೆ.ಸಾಧು ಕೋಕಿಲ, ಚಿಕ್ಕಣ್ಣ ನಟಿಸುತ್ತಿರುವ  ಮತ್ತು ಅರ್ಜುನ್ ಜನ್ಯ ಸಂಗೀತ ಇರುವ ಈ ಚಿತ್ರದ ಮೊದಲ ಶೆಡ್ಯೂಲ್ ಈಗಾಗಲೇ ಪೂರ್ಣವಾಗಿದೆ. 

Share this Story:

Follow Webdunia kannada