ಸಲ್ಮಾನ್ ಖಾನ್ ತನ್ನ ತಂಗಿ ಅರ್ಪಿತಾ ಖಾನ್ ಮನೆಗೆ ಮೊಟ್ಟ ಮೊದಲ ಬಾರಿ ಹೋಗುತ್ತಿದ್ದಾರೆ. ಅವರು ರಿಸಪ್ಷನ್ ಗೆಂದು ಹಿಮಾಚಲ್ ಪ್ರದೇಶದ ಮಂಡಿ ಪಟ್ಟಣಕ್ಕೆ ಹೋಗುತ್ತಿದ್ದಾರೆ. ಅವರನ್ನು ತಮ್ಮ ರಾಜ್ಯಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸುತ್ತಾ ಹಿಮಾಚಲ್ ಸರ್ಕಾರ ಹೆಲಿಕಾಪ್ಟರ್ ನ್ನು ಕಳುಹಿಸಲು ನಿರ್ಧಾರ ಮಾಡಿದೆ.
ಸಲ್ಮಾನ್ ಖಾನ್ ಅವರ ಕುಟುಂಬದ ಎಲ್ಲಾ ಸದಸ್ಯರುಗಳು ಈ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಆಯುಶ್ ಶರ್ಮ ಜೊತೆ ತನ್ನ ತಂಗಿ ಅರ್ಪಿತಾ ಮದುವೆ ಆದ ಬಳಿಕ ಶರ್ಮ ಅವರ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ನಡೆಯುವ ಧಾಮ್ ಕಾರ್ಯಕ್ರಮವನ್ನು ಗ್ರಾಮಿಣಾಭಿವೃದ್ಧಿ ಮಂತ್ರಿ , ಆಯುಶ್ ಶರ್ಮ ಅವರ ತಂದೆ ಆದ ಅನಿಲ್ ಶರ್ಮ ಅವರು ಅದ್ಧೂರಿಯಿಂದ ಮಾಡುತ್ತಿದ್ದಾರೆ.
ಈ ಸಮಯದಲ್ಲಿ ಅರ್ಪಿತ, ಆಯುಶ್ ರಿಸಪ್ಷನ್ ವನ್ನು ಸಹಿತ ಅತ್ಯಂತ ಅದ್ಧೂರಿಯಿಂದ ಮಾಡುತ್ತಿದ್ದಾರೆ. ಸುಮಾರು ಹತ್ತುಸಾವಿರ ಮಂದಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆಯಂತೆ. ಮುಖ್ಯಮಂತ್ರಿ ವೀರಭದ್ರಸಿಂಗ್ ಅವರು ಬ್ಯುಸಿಯಾಗಿರುವ ನಿಮಿತ್ತ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲವಂತೆ.
ಧಾಮ್ ಕಾರ್ಯಕ್ರಮದಲ್ಲಿ ಅದರ ಆಚಾರದ ಅನ್ವಯ ಅತಿಥಿಗಳನ್ನು ನೆಲದ ಮೇಲೆ ಕುಳ್ಳರಿಸಿ ಎಲೆಯಲ್ಲಿ ಊಟ ನೀಡಲಾಗುತ್ತದೆ. ರುಚಿಕರವಾದ ಅಡುಗೆಗಳು ಹೇರಳವಾಗಿರುತ್ತದೆ. ಈ ಊಟವು ನಾಲ್ಕು ಘಟ್ಟಗಳಲ್ಲಿ ಪೂರ್ಣವಾಗುತ್ತದೆ.