Webdunia - Bharat's app for daily news and videos

Install App

ಬಾಹುಬಲಿ ವಿವಾದ: ಫೇಸ್ ಬುಕ್ ಪೋಸ್ಟ್ ವಿರುದ್ಧ ಸಾ ರಾ ಗೋವಿಂದು ದೂರು

Webdunia
ಶುಕ್ರವಾರ, 21 ಏಪ್ರಿಲ್ 2017 (11:12 IST)
ಬೆಂಗಳೂರು: ಕನ್ನಡಿಗರಿಗೆ ಅವಹೇಳನ ಮಾಡಿ ಮಾತನಾಡಿದ್ದಾರೆಂಬ ಕಾರಣಕ್ಕೆ ತಮಿಳು ನಟ ಸತ್ಯರಾಜ್ ಕ್ಷಮೆ ಯಾಚಿಸುವವರೆಗೂ ಬಾಹುಬಲಿ 2 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಲ್ಲ ಎನ್ನುತ್ತಿರುವ ಕನ್ನಡ ಸಂಘಟನೆ ಬಗ್ಗೆ ಟೀಕಿಸಿದ ವ್ಯಕ್ತಿಯ ವಿರುದ್ಧ ನಿರ್ಮಾಪಕ ಸಾ ರಾ ಗೋವಿಂದು ದೂರು ನೀಡಿದ್ದಾರೆ.

 
ಪ್ರಶಾಂತ್ ಸಂಭರ್ಗಿ ಎನ್ನುವವರು, ಬಾಹುಬಲಿ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತಿರುವ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ ರಾ ಗೋವಿಂದು ಇಷ್ಟೆಲ್ಲಾ ಮಾಡುತ್ತಿರುವುದು ಹಣಕ್ಕಾಗಿ ಎಂದು ಫೇಸ್ ಬುಕ್ ನಲ್ಲಿ ಆರೋಪಿಸಿದ್ದರು.

ಈ ಬಗ್ಗೆ ಸಾ ರಾ ಗೋವಿಂದು ಹೈ ಗ್ರೌಂಡ್ ಠಾಣೆ ಪೊಲೀಸರಿಗೆ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳು ನಟ ಶರತ್ ಕುಮಾರ್ ಗೆ ರಾಜಕುಮಾರ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರಿಗೆ ಯಾವುದೇ ತೊಂದರೆ ಮಾಡಲಿಲ್ಲವೆಂದ ಮೇಲೆ ಬಾಹುಬಲಿಗೆ ಯಾಕೆ ತಕರಾರು ಎಂದು ಪ್ರಶಾಂತ್ ಪ್ರಶ್ನಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ಗಾಯಕ ಸೋನು ನಿಗಮ್‌ಗೆ ಬಿಗ್‌ ರಿಲೀಫ್‌, ಹೈಕೋರ್ಟ್‌ ಹೇಳಿದ್ದೇನು ನೋಡಿ

Jr NTR: ಎನ್‌ಟಿಆರ್‌ಗೆ ಅರಸಿ ಬಂದ ಬಿಗ್ ಬಾಲಿವುಡ್ ಆಫರ್‌, ಇಲ್ಲಿದೆ ಅಪ್ಡೇಟ್ಸ್‌

Chaitra Kundapur: ಎರಡು ಕ್ವಾರ್ಟರ್ ಕೊಟ್ರೆ ದೇವರು ಅನ್ನುವವರು ನನ್ನ ತಂದೆ: ಚೈತ್ರಾ ಕುಂದಾಪುರ

Chaitra Kundapura: ಚೈತ್ರಾ ಕುಂದಾಪುರ ಓರ್ವ ಕಳ್ಳಿ, ಅವಳ ಗಂಡನೂ ಅಷ್ಟೇ: ತಂದೆಯಿಂದ ಗಂಭೀರ ಆರೋಪ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

ಮುಂದಿನ ಸುದ್ದಿ
Show comments