Select Your Language

Notifications

webdunia
webdunia
webdunia
webdunia

ದರ್ಶನ್- ಸುದೀಪ್ ಕುಚಿಕು ಸ್ನೇಹ ಅಂತ್ಯ?

ದರ್ಶನ್- ಸುದೀಪ್ ಕುಚಿಕು ಸ್ನೇಹ ಅಂತ್ಯ?
, ಸೋಮವಾರ, 6 ಮಾರ್ಚ್ 2017 (07:26 IST)
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಗಳಾದ  ಸುದೀಪ್- ದರ್ಶನ್ ಸ್ನೇಹ ಮುರಿದು ಬಿದ್ದಿದೆ. ನಮ್ಮ ನಡುವೆ ಯಾವುದೇ ಸ್ನೇಹವಿಲ್ಲ ಎಂದು ಸ್ವತಃ ದರ್ಶನ್ ಟ್ವೀಟ್ ಮಾಡಿದ್ದಾರೆ.
 
ನಾನು  ಹಾಗೂ ಸುದೀಪ್ ಇನ್ನು ಸ್ನೇಹಿತರಲ್ಲ. ಕೇವಲ ಕನ್ನಡ ಚಿತ್ರರಂಗದ ನಟರಷ್ಟೇ. ನಮ್ಮ ನಡುವಿನ ಸ್ನೇಹದ ಕುರಿತು ಯಾವುದೇ ಊಹಾಪೋಹಗಳು ಇಂದಿನಿಂದ ಕೊನೆಗೊಳ್ಳಲಿ, ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
 
ತಮ್ಮ ಈ ನಡೆಗೆ ಸಿನಿಪ್ರಿಯರು ಆಘಾತ ವ್ಯಕ್ತಪಡಿಸುತ್ತಿದ್ದಂತೆ ದರ್ಶನ್ ತಮ್ಮ ಕೋಪಕ್ಕೆ ಕಾರಣವಾಗಿರುವ ವಿಡಿಯೋವೊಂದನ್ನು ಸಹ ಟ್ವೀಟ್ ಮಾಡಿದ್ದು, ಇದೇ ಮೊದಲ ಬಾರಿಗೆ ಈ ವಿಡಿಯೋ ನೋಡಿದಾಗ ನನಗೆ ನೋವಾಗಿದೆ. ಈ ಹೇಳಿಕೆ ನೀಡಿದ್ದೇಕೆ? ಈ ಕುರಿತು ಸುದೀಪ್ ಕ್ಲಾರಿಟಿ ನೀಡಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
 
ದರ್ಶನ್ ಅವರ ಈ ಮುನಿಸಿಗೆ ಕಾರಣ, ಸುದೀಪ್  ಅವರು ಕೆಲ ವರ್ಷಗಳ ಹಿಂದೆ ನೀಡಿರುವ ಹೇಳಿಕೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಾ, ಮೆಜೆಸ್ಟಿಕ್‌( ದರ್ಶನ್‌ಗೆ ಬ್ರೇಕ್ ನೀಡಿದ ಚಿತ್ರ)ನಲ್ಲಿ ನಟಿಸಲು ಬಂದ ಅವಕಾಶವನ್ನು ನಾನು ನಿರಾಕರಿಸಿದ್ದೆ. ಅಲ್ಲದೇ ಈ ಅವಕಾಶವನ್ನು ದರ್ಶನ್ ಅವರಿಗೆ ನೀಡುವಂತೆ ಸೂಚಿಸಿದ್ದೆ ಎಂದು ಹೇಳುವುದರ ಮೂಲಕ ದರ್ಶನ್ ಅವರಿಗೆ ಅವಕಾಶ ಸಿಗಲು ತಾವೇ ಕಾರಣ ಎಂದು ಪ್ರತಿಪಾದಿಸಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಜಪೂತರ ಒಪ್ಪಿಗೆ ಇದ್ದರೆ ಮಾತ್ರ ’ಪದ್ಮಾವತಿ’ಗೆ ರಿಲೀಸ್ ಭಾಗ್ಯ