Webdunia - Bharat's app for daily news and videos

Install App

3ನೇ ಚಿತ್ರ ನಿರ್ದೇಶನಕ್ಕೆ ಅಡಿ ಇಟ್ಟ ನಟಿ ರೇವತಿ

Webdunia
ಶುಕ್ರವಾರ, 24 ಏಪ್ರಿಲ್ 2015 (10:08 IST)
ರೇವತಿ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ದಕ್ಷಿಣ ಭಾರತದ ಕಲಾವಿದೆಯಾಗಿ ಹೆಚ್ಚು ಗುರುತಿಸಿಕೊಂಡ ಕಲಾವಿದೆ. ಆಕೆ ಕೇವಲ ನಟಿ ಮಾತ್ರವಲ್ಲ ಅತ್ಯುತ್ತಮ ನಿರ್ದೇಶಕಿಯಾಗಿ ಸಹಿತ ಎಲ್ಲರ ಗಮನ ಸೆಳೆದ ಪ್ರತಿಭಾವಂತೆ. ಹಿಂದಿಯಲ್ಲಿ ಫಿರ್ ಮಿಲೇಂಗೆ, ಮುಂಬೈ ಕಟ್ಟಿಂಗ್ ಎನ್ನುವ ಚಿತ್ರಗಳನ್ನು ನೀಡಿದ ರೇವತಿ ಈಗ ಮೂರನೇ ಚಿತ್ರದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. 
ಇದು ತನ್ನ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ. ತನ್ನ ತಾಜಾ ಚಿತ್ರದ ಬಗ್ಗೆ ಹೇಳುತ್ತಾ ಇದನ್ನು ಬಾಲಿವುಡ್ ನಿರ್ದೇಶಕ ಜಾಯ್ ಅಕ್ಬರ್ ಅವರು ನಿರ್ದೇಶಿಸಿದ ಜಿಂದಗಿ ನಾ ಮಿಲೇಗಾ ದುಬಾರ ರೀತಿಯಲ್ಲಿ ನಿರ್ಮಿಸಬೇಕು ಎನ್ನುವ ಹುಮ್ಮಸ್ಸಿನಲ್ಲಿ ಇದ್ದಾರೆ. 
 
ಅದಕ್ಕೆ ಪೂರಕವಾದ ಕಥೆಯನ್ನು ಸಿದ್ಧ ಮಾಡಿದ್ದಾರಂತೆ ರೇವತಿ. ಹಿಂದಿ ಭಾಷೆಗೆ ಮಾತ್ರ ತಮ್ಮ ಚಿತ್ರವನ್ನು ಪರಿಮಿತಿಗೊಳಿಸದೆ ತಮಿಳು ಹಾಗೂ ಮಲೆಯಾಳಂ ಭಾಷೆ ಪ್ರೇಕ್ಷಕರಿಗೂ ಇಷ್ಟ ಆಗುವಂತೆ ಚಿತ್ರಕಥೆ ತಯಾರಿಸಿದ್ದಾರಂತೆ. ಈ ಮೂರು ಭಾಷೆಗಳಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ. 
 
ಈ ರೀತಿಯ ಚಿತ್ರವನ್ನು ನಿರ್ದೇಶಿಸಲು ಹೆಚ್ಚು ಪ್ರತಿಭೆ ಬೇಕು. ಆ ಪ್ರತಿಭೆಯನ್ನು ತಾನು ಹೊಂದಿದ್ದೇನೆ  ಎಂದು ಈ ಹಿರಿಯ ನಟಿ ಹೇಳಿದ್ದಾರೆ. ಈ ಚಿತ್ರಕ್ಕೆ ಇನ್ನು ಶೀರ್ಷಿಕೆ ನಿಕ್ಕಿಯಾಗಿಲ್ಲ. ಇದಕ್ಕೆ ಸಂಬಂಧಪಟ್ಟ ವಿವರಗಳನ್ನು ಸಧ್ಯದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ ರೇವತಿ ಮೇಡಂ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments