Webdunia - Bharat's app for daily news and videos

Install App

ಕೆ.ಎಸ್.ರವಿಕುಮಾರ್-ಸುದೀಪ್ ಚಿತ್ರಕ್ಕೆ ಮುಹೂರ್ತ ಫಿಕ್ಸ್

Webdunia
ಸೋಮವಾರ, 6 ಜುಲೈ 2015 (10:13 IST)
ಕನ್ನಡ , ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಸುದೀಪ್ ಅವರ ಅಭಿನಯದಲ್ಲಿ  ಈಗ ಏಕ ಕಾಲಕ್ಕೆ ದ್ವಿಭಾಷ ಚಿತ್ರ ನಿರ್ಮಾಣವಾಗುತ್ತಿದೆ. ಕಾಲಿವುಡ್ ಪ್ರಸಿದ್ಧ ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ನಿರ್ದೇಶನದ ಕನ್ನಡ ಚಿತ್ರ ಅದ್ಯಾಕೋ ಆರಂಭವಾಗಲು ತಡ ಆಗುತ್ತಿದೆ. ಕಿಚ್ಚ ಸುದೀಪ್ ಅವರ ನಟನೆಯ ಈ ಚಿತ್ರಕ್ಕೆ ಅದ್ಯಾಕೋ ಮಹೂರ್ತ ಇನ್ನು ಸರಿಯಾಗಿ ಕೂಡಿ  ಬಂದಿಲ್ಲ.ಈ ಚಿತ್ರ ಈಗ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ.  ಏಕಕಾಲದಲ್ಲಿ  ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಸುದೀಪ್ ಮೊಟ್ಟಮೊದಲ ಬಾರಿಗೆ ನಟಿಸುತ್ತಿದ್ದಾರೆ.ಇನ್ನೂ ಇದಕ್ಕೆ  ಶೀರ್ಷಿಕೆ ನೀಡಿಲ್ಲ, ಆದರೆ ಗಾಂಧಿನಗರಿಗರು ಇದನ್ನು ಕೋಟಿಗೊಬ್ಬ 2 ಎಂದು ಹೆಸರು ನೀಡಿದ್ದಾರೆ.ಈ ಚಿತ್ರವೂ ಜುಲೈ  10ನೇ ತಾರೀಖು  ತನ್ನ ಕೆಲಸ ಆರಂಭ ಮಾಡುತ್ತದೆ ಎಂದು ಕೇಳಿ ಬಂದಿತ್ತು. ಆದರೆ ಈಗ ಅದು ಈಗ 17 ನೇ ತಾರೀಖಿಗೆ ಮುಂದೂಡಿದೆ.  
ಮೊದಲ ಶೆಡ್ಯೂಲ್ ಬಹುಶಃ 40 ದಿನಗಳು ಇರಬಹುದು, ಒಟ್ಟು ಚಿತ್ರ  100 ದಿನಗಳ ಕಾಲ ಕಾರ್ಯ ನಿರ್ವಹಿಸುತ್ತದೆ ಎನ್ನುವ ಸುದ್ದಿ ಚಂದನವನದ ಮಂದಿಯಿಂದ ಹೊರ ಬಂದಿದೆ. ಇನ್ನೂ ಈ ಚಿತ್ರಕ್ಕೆ ಹೀರೋಯಿನ್ ಆಯ್ಕೆ ಆಗಿಲ್ಲ. ಮೊದಲ ಶೆಡ್ಯೂಲ್ ನಲ್ಲಿ ಸುದೀಪ್ ಹಾಗೂ ಇನ್ನಿತರ ಕಲಾವಿದರು ಮಾತ್ರ ಭಾಗವಹಿಸುತ್ತಾರಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments