Webdunia - Bharat's app for daily news and videos

Install App

ಸಸ್ಯಹಾರಿಯಾಗಿ ಬದಲಾದ ರಾಣಾ ದಗ್ಗುಬಾಟಿ

Webdunia
ಶನಿವಾರ, 25 ಏಪ್ರಿಲ್ 2015 (10:09 IST)
ಶಾಕಾಹಾರದಿಂದ ದೊರಕುವ ಉಪಯೋಗಗಳ ಬಗ್ಗೆ ತಿಳಿದ ಬಾಲಿವುಡ್ ನಟ ಆಮೀರ್ ಖಾನ್ ಮಾಮ್ಸಾಹಾರದಿಂದ ದೂರವಾಗಿ ಸಸ್ಯಹಾರಿಯಾಗಿ ಬದಲಾದರು. ಈಗ ಆ ಪಟ್ಟಿಗೆ ಮತ್ತೊಬ್ಬ ಯುವನಾಯಕ ಸೇರ್ಪಡೆ ಆಗಿದ್ದಾರೆ. ಇನ್ನು ಮುಂದೆ ಅವರು ಮಾಂಸಾಹಾರದಿಂದ ದೂರ ಇರಲು ನಿಶ್ಚಯ ಮಾಡಿದ್ದಾರೆ. ಆತ ಬೇರೆ ಯಾರೂ ಅಲ್ಲ ಬಾಲಿವುಡ್ ಹಾಗೂ ಟಾಲಿವುಡ್‌ನ ನಟ ರಾಣಾ ದಗ್ಗುಬಾಟಿ. ತಮ್ಮ ಈ ನಿರ್ಣಯವನ್ನು ಅತಿ ಶೀಘ್ರದಲ್ಲೇ ಜಾರಿ ಮಾಡುವುದಾಗಿ, ಬದುಕಿನ ಭಾಗವನ್ನಾಗಿ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ ರಾಣಾ. 
ಇವರ ಈ ನಿರ್ಧಾರದಿಂದ ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಅನಿಮಲ್ಸ್) ಸಂಸ್ಥೆಯು ಸಹಿತ ರಾಣಾಗೆ ಅಭಿನಂದನೆ ಹೇಳಿದೆ. ಜೊತೆಗೆ ಬಿಸ್ಕತ್, ಚಾಕೋಲೆಟ್, ಸೋಯಾ ಹಾಲಿನಿಂದ ತಯಾರಿಸಿದ ಪದಾರ್ಥಗಳನ್ನು ಸಹಿತ ಕಾಣಿಕೆಯಾಗಿ ನೀಡಿದೆ. ಈ ಸಂಗತಿಯನ್ನು ರಾಣಾ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ರಾಣ ರುದ್ರಮ್ಮದೇವಿ, ಬಾಹುಬಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 
 
ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಣಾ ಅವರ ಜೊತೆ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ ಮುಂತಾದವರು ನಟಿಸಿದ್ದಾರೆ. ಶೋಭಾ ಯಾರ್ಲ ಗುಡ್ಡ, ಪ್ರಸಾದ್ ಮತ್ತು ದೇವಿನೇನಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments