Select Your Language

Notifications

webdunia
webdunia
webdunia
webdunia

ಸಸ್ಯಹಾರಿಯಾಗಿ ಬದಲಾದ ರಾಣಾ ದಗ್ಗುಬಾಟಿ

ಸಸ್ಯಹಾರಿಯಾಗಿ ಬದಲಾದ ರಾಣಾ ದಗ್ಗುಬಾಟಿ
, ಶನಿವಾರ, 25 ಏಪ್ರಿಲ್ 2015 (10:09 IST)
ಶಾಕಾಹಾರದಿಂದ ದೊರಕುವ ಉಪಯೋಗಗಳ ಬಗ್ಗೆ ತಿಳಿದ ಬಾಲಿವುಡ್ ನಟ ಆಮೀರ್ ಖಾನ್ ಮಾಮ್ಸಾಹಾರದಿಂದ ದೂರವಾಗಿ ಸಸ್ಯಹಾರಿಯಾಗಿ ಬದಲಾದರು. ಈಗ ಆ ಪಟ್ಟಿಗೆ ಮತ್ತೊಬ್ಬ ಯುವನಾಯಕ ಸೇರ್ಪಡೆ ಆಗಿದ್ದಾರೆ. ಇನ್ನು ಮುಂದೆ ಅವರು ಮಾಂಸಾಹಾರದಿಂದ ದೂರ ಇರಲು ನಿಶ್ಚಯ ಮಾಡಿದ್ದಾರೆ. ಆತ ಬೇರೆ ಯಾರೂ ಅಲ್ಲ ಬಾಲಿವುಡ್ ಹಾಗೂ ಟಾಲಿವುಡ್‌ನ ನಟ ರಾಣಾ ದಗ್ಗುಬಾಟಿ. ತಮ್ಮ ಈ ನಿರ್ಣಯವನ್ನು ಅತಿ ಶೀಘ್ರದಲ್ಲೇ ಜಾರಿ ಮಾಡುವುದಾಗಿ, ಬದುಕಿನ ಭಾಗವನ್ನಾಗಿ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ ರಾಣಾ. 
ಇವರ ಈ ನಿರ್ಧಾರದಿಂದ ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ ಮೆಂಟ್ ಅನಿಮಲ್ಸ್) ಸಂಸ್ಥೆಯು ಸಹಿತ ರಾಣಾಗೆ ಅಭಿನಂದನೆ ಹೇಳಿದೆ. ಜೊತೆಗೆ ಬಿಸ್ಕತ್, ಚಾಕೋಲೆಟ್, ಸೋಯಾ ಹಾಲಿನಿಂದ ತಯಾರಿಸಿದ ಪದಾರ್ಥಗಳನ್ನು ಸಹಿತ ಕಾಣಿಕೆಯಾಗಿ ನೀಡಿದೆ. ಈ ಸಂಗತಿಯನ್ನು ರಾಣಾ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ರಾಣ ರುದ್ರಮ್ಮದೇವಿ, ಬಾಹುಬಲಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 
 
ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಣಾ ಅವರ ಜೊತೆ ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ ಮುಂತಾದವರು ನಟಿಸಿದ್ದಾರೆ. ಶೋಭಾ ಯಾರ್ಲ ಗುಡ್ಡ, ಪ್ರಸಾದ್ ಮತ್ತು ದೇವಿನೇನಿ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. 

Share this Story:

Follow Webdunia kannada