Select Your Language

Notifications

webdunia
webdunia
webdunia
webdunia

ಅಲ್ಲಿಯೂ ಇಲ್ಲಿಯೂ ಹಾಗೂ ಎಲ್ಲಿಯೂ ಸಲ್ಲದ ಸ್ಯಾಂಡಲ್ ವುಡ್ ಕ್ವೀನ್ ರಮ್ಯ

ಅಲ್ಲಿಯೂ ಇಲ್ಲಿಯೂ ಹಾಗೂ ಎಲ್ಲಿಯೂ ಸಲ್ಲದ ಸ್ಯಾಂಡಲ್ ವುಡ್ ಕ್ವೀನ್ ರಮ್ಯ
, ಶನಿವಾರ, 25 ಜುಲೈ 2015 (10:12 IST)
ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಇದ್ದ ಕಡೆ ವಿವಾದ ಸಾಮಾನ್ಯ. ಮುದ್ದು ಮುದ್ದಾದ ಈ ತಾರೆ ಯಶಸ್ವಿ ನಾಯಕಿ ನಟಿಯಾಗಿದ್ದಾಗಲೇ ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲೂ ನಟಿಸಿ ಎಲ್ಲಾ ಕಡೆಯಲ್ಲೂ ಅಭಿಮಾನಿಗಳನ್ನು ಪಡೆದಿದ್ದರು. ಆದರೆ ಅವರ ಈ ಯಶಸ್ಸು ಕಂಡು ರಾಜಕೀಯದವರು ಸುಮ್ಮನೆ ಬಿಡದೆ ಆಕೆಯನ್ನು ರಾಜಕೀಯದತ್ತ ಸೆಳೆದುಕೊಂಡರು. ಅದರ ಪರಿಣಾಮ ಆಕೆ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆದರೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಸಹಿತ ಗೆಲುವು ಪಡೆಯಲಿಲ್ಲ. ಅದಕ್ಕೆ ಅನೇಕರನ್ನು ಕಾರಣವಾಗಿಸಿ ವಿದೇಶಕ್ಕೆ ಹೊರಟು ಹೋದರು.
ಇತ್ತ ಮಂಡ್ಯದಲ್ಲಿ ನಿರಂತರವಾಗಿ ರೈತರ ಆತ್ಮಹತ್ಯೆ ಸಾಗಿದೆ. ಅವರ ಈ ಸಮಸ್ಯೆ  ಅರಿಯಲು ನಾಯಕಿ ನಾಪತ್ತೆ. ಪ್ರಸ್ತುತ ರಮ್ಯ ಬೆಂಗಳೂರಿಗೆ ಬಂದಿದ್ದರು ಸಹಿತ  ಮಂಡ್ಯ ಕಡೆ ಮಖ ಹಾಕಿ ಮಲಗಿಲ್ಲ. ಇದರಿಂದ ಸಾಮಾನ್ಯರು ರೊಚ್ಚಿಗೆದ್ದಿದ್ದಾರೆ. ರಮ್ಯ ಅವರ ಈ ವರ್ತನೆಗೆ ಬೇಸತ್ತ ಕಾಂಗೈ ಮುಖಂಡರು ಈವಮ್ಮ ನಮ್ ಪಾರ್ಟಿನಾಗೆ ಇರೋದೇ ಬ್ಯಾಡ್ ಕಣ್ ಮೇಡಮ್ಮು ಎಂದು ಮ್ಯಾಮ್ ಸೋನಿಯಾಜಿ ಅವರಿಗೆ ಪತ್ರ ಮುಖೇನ ದುಃಖ ಹಾಗೂ ಆಕ್ರೋಶ ತೋರಿದ್ದಾರೆ. 
ರಾಜಕೀಯದ ಕಥೆ ಬೇಡ ಕನಿಷ್ಠ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಾ ಎಂದರೆ ಪ್ರಸ್ತುತ  ಆಕೆ ಖಾಲಿ ಕೈ. ಆಕೆ ಚುನಾವಣೆಗೆ ಮುನ್ನ ಮಾಡಿದ ನೀರ್ ದೋಸೆ ಕೆಲಸವು ಈಗ  ಸಿನಿಮಾದವರು ಸಹ ಆಕೆಯತ್ತ ದೃಷ್ಟಿ ಹಾಯಿಸಲು ಭಯ ಪಡುವಂತಾಗಿದೆ ಎಂದೇ ಹೇಳಬಹುದಾಗಿದೆ.  ಪಾಪ  ಈಗ ಆಕೆ ಅಲ್ಲಿಯೂ ಹಾಗೂ ಇಲ್ಲಿಯೂ ಸಲ್ಲದ ಸೆಲೆಬ್ರಿಟಿ ಆಗಿದ್ದಾರೆ. 

Share this Story:

Follow Webdunia kannada