Webdunia - Bharat's app for daily news and videos

Install App

30 ವರ್ಷಗಳ ಬಳಿಕ ಮತ್ತೆ ನಿರ್ದೇಶನದತ್ತ ಒಲವು ತೋರಿದ ರಮೇಶ್ ಭಟ್

Webdunia
ಬುಧವಾರ, 27 ಮೇ 2015 (10:17 IST)
ಚಂದನವನದ ಹಿರಿಯ ಅತ್ಯುತ್ತಮ ಪ್ರತಿಭಾವಂತ ನಟ ರಮೇಶ್ ಭಟ್ ಅವರು. ಅವರ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ ಏಕೈಕ ಚಿತ್ರ ಪರಮೇಶಿಯ ಪ್ರೇಮ ಪ್ರಸಂಗ. ಈ ಚಿತ್ರ  ಬಿಡುಗಡೆ ಆಗಿ ಈಗಾಗಲೇ 30 ವರ್ಷಗಳು ಪೂರ್ಣವಾಗಿದೆ.1985 ರಲ್ಲಿ ಬಿಡುಗಡೆಯಾದ ಆ ಚಿತ್ರವು ಬಾಕ್ಸಾಫೀಸಲ್ಲಿ  ಉತ್ತಮವಾದ ಫಲಿತಾಂಶ ನೀಡಿತ್ತು. ಅದಾದ ಬಳಿಕ ರಮೇಶ್ ಭಟ್ ಅವರು ನಟನೆಗೆ ತಮ್ಮನ್ನು ಸೀಮಿತಗೊಳಿಸಿಕೊಂಡುಬಿಟ್ಟರು. ಆದರೆ ಬಹುಕಾಲದ ಬಳಿಕ ನಟ ರಮೇಶ್ ಭಟ್ ಅವರು ಮತ್ತೊಮ್ಮೆ ನಿರ್ದೇಶಕರ ಕುರ್ಚಿಯಲ್ಲಿ ಕೂರಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಸಿಹಿ ಸುದ್ದಿ ಹೊರಬಂದಿದೆ.ಪಪ್ರೇಪ  ಚಿತ್ರದ ಕಥೆಯನ್ನು ಕನ್ನಡ ಚಿತ್ರರಂಗದ ಅಸಮಾನ್ಯ ನಿರ್ದೇಶಕ-ನಟ ಶಂಕರ್ ನಾಗ್ ಅವರು ರಚನೆ ಮಾಡಿದ್ದು. ಈ ಚಿತ್ರದಲ್ಲಿ ಶಂಕರ್ ನಾಗ್, ಅರುಂಧತಿ ನಾಗ್ ಮತ್ತು ಮಾಸ್ಟರ್ ಮಂಜುನಾಥ್ ಅಭಿನಯಿಸಿದ್ದರು. ಈ ಚಿತ್ರದ ಅಭಿನಯಕ್ಕೆಂದು ಮಾಸ್ಟರ್ ಮಂಜುನಾಥ್ ಅವರಿಗೆ ರಾಜ್ಯಪ್ರಶಸ್ತಿ ದೊರಕಿತ್ತು. 
ಒಂದೇ ತೆರನಾದ ಪಾತ್ರಗಳನ್ನೂ ಮಾಡುವುದರಲ್ಲೇ ತಮ್ಮನ್ನು ತೊಡಗಿಸಿ ಕೊಂಡಿದ್ದು, ಈಗ ಬದಲಾವಣೆಗಾಗಿ ಚಿತ್ರನಿರ್ದೇಶನ ಮಾಡುವ ಕಡೆಗೆ ತಮ್ಮ ಚಿತ್ತ ನೆಟ್ಟಿರುವುದಾಗಿ ನಟ - ನಿರ್ದೇಶಕ ರಮೇಶ್ ಭಟ್ ಅವರು ತಿಳಿಸಿದ್ದಾರೆ. ಈ ವರ್ಷದೊಳಗೆ ಚಿತ್ರ ಸೆಟ್ ಏರುತ್ತಿದೆ ಎನ್ನುವ ಸುದ್ದಿ ಇದೆ. ಸರಿ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ರಮೇಶ್ ಭಟ್  1981 ರಲ್ಲಿ ಬಿಡುಗಡೆಯಾದ ಮಿಂಚಿನ ಓಟ ಚಿತ್ರದ ಮೂಲಕ ಸಿನಿರಂಗಕ್ಕೆ ಬಂದರು. ಈಗ ಹೊಸ ಚಿತ್ರದ ನಿರ್ದೇಶನದತ್ತ ಒಲವು ತೋರುತ್ತಿರುವ ರಮೇಶ್ ಭಟ್ ಅವರಿಗೆ ನಮ್ಮ ಕಡೆಯಿಂದ ಶುಭ ಹಾರೈಕೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments