Webdunia - Bharat's app for daily news and videos

Install App

ಮಾಜಿ ಸಚಿವ ರಾಮ್ ದಾಸ್ ಪ್ರಕರಣದ ಮುಖ್ಯ ಪಾತ್ರಧಾರಿ ಪ್ರೇಮಕುಮಾರಿ ನಟನೆಯತ್ತ?

Webdunia
ಶನಿವಾರ, 18 ಅಕ್ಟೋಬರ್ 2014 (14:13 IST)
ಬಿಗ್ ಬಾಸ್ ಮನೆಯಲ್ಲಿ ಗೆಲುವು ಪಡೆದು ಈಗ ತನ್ನ ರೊಟೀನ್ ಬದುಕಿನತ್ತ ಗಮನ ನೀಡಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರ ಲವ್ ಆನ್ ಎನ್ ಹೆಚ್ 4. ಈ ಚಿತ್ರದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರು ಸಾಕಷ್ಟು ಸುದ್ದಿ ಮಾಡಿದ ಮಂದಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 
 
ಅವರಲ್ಲಿ ನರ್ಸ್ ಜಯಲಕ್ಷ್ಮಿ, ರಿಷಿ ಕುಮಾರ್ ಸ್ವಾಮಿ ಮುಂತಾದವರು. ಈ ಗುಂಪಿಗೆ ಹೊಸ ಸೇರ್ಪಡೆ ಅಂದರೆ ಪ್ರೇಮಕುಮಾರಿ.ಈ ಮೂಲಕ ಮತ್ತೊಂದು ವಿವಾದಿತ ಹೆಣ್ಣುಮಗಳನ್ನು ನಿರ್ದೇಶಕ ಶ್ರೀನಾಥ್ ಅವರು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ತಮ್ಮ ಟೀಮ್‌ನಲ್ಲಿ. ಮಾಜಿ ಸಚಿವ ರಾಮ್ ದಾಸ್ ಅವರ ಬದುಕಿನೊಂದಿಗೆ ತಳುಕು ಹಾಕಿಕೊಂಡಿರುವ ಪ್ರೇಮಕುಮಾರಿ ಈಗ ನಟಿಯಾಗಿ ಬದಲಾಗುತ್ತಿದ್ದಾರೆ. 
 
ಇದರಲ್ಲಿ ಪ್ರೇಂ ಕುಮಾರಿ ಪತ್ರಕರ್ತೆಯಾಗಿ ನಟಿಸುತ್ತಿದ್ದಾರಂತೆ. ಗುರುವಾರ ಆಕೆ ಕಂಠೀರವ ಸ್ಟುಡಿಯೋದಲ್ಲಿ  ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಚಿತ್ರದಲ್ಲಿ ಹೊಸ ಗೆಟ್ ಅಪ್ ಮೂಲಕ ಕಂಡು ಬರಲಿದ್ದಾರಂತೆ. ಪ್ರೇಮಕುಮಾರಿ ಅವರ ವ್ಯಕ್ತಿತ್ವಕ್ಕೆ ಹೊಂದುವ ಪಾತ್ರ ನೀಡಲಾಗಿದೆ. ಇದರಲ್ಲಿ ಆಕೆಯದ್ದು ಬಹು ಮುಖ್ಯ ಪಾತ್ರ ಎಂದು ಹೇಳಿದ್ದಾರೆ ನಿರ್ದೇಶಕ ಶ್ರೀನಾಥ್. 
 
ನಾವು ಆಕೆಯ ಬಳಿ ನಟಿಸಲು ಕೇಳಿದಾಗ ಆಕೆ ಸಮ್ಮತಿಸಿದರು ಎಂದು ಹೇಳಿದ್ದಾರೆ ನಿರ್ದೇಶಕ. ಈ ಚಿತ್ರದಲ್ಲಿ ಅಕುಲ್ ಬಾಲಾಜಿ ಮತ್ತು ತಿಲಕ್ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಒಟ್ಟಾರೆ ಹೇಗಾದ್ರು ಸರಿ ಚಿತ್ರ ಗೆಲ್ಲಬೇಕು ಎಂದು ಅನೇಕ ತಂತ್ರಗಳನ್ನು ಮಾಡುತ್ತಿದ್ದಾರೆ ನಿರ್ದೇಶಕರು. ಇನ್ನು ಚಿತ್ರ ಪೂರ್ಣ ಆಗುವಷ್ಟರಲ್ಲಿ ಮತ್ತಿನ್ಯಾವ ವಿವಾದಿತರು ಸೇರ್ಪಡೆ ಆಗುತ್ತಾರೋ ಗೊತ್ತಿಲ್ಲ! 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?