ಬೆಂಗಳೂರು: ಕಿರಿಕ್ ಪಾರ್ಟಿ ಗಲಾಟೆ ಜೋರಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಹಾಡುಗಳು ಭಾರೀ ಸೌಂಡ್ ಮಾಡುತ್ತಿವೆ. ಅಂತಹ ಒಂದು ಹಾಡನ್ನು ಚಿತ್ರ ತಂಡ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ನಟ ರವಿಚಂದ್ರನ್ ಗೆ ಡೆಡಿಕೇಟ್ ಮಾಡಿದ್ದಾರೆ.
ಪ್ರೇಮಲೋಕ ಮೂಲಕ ಕಾಲೇಜು ದಿನಗಳ ಕಿರಿಕ್ ಅನ್ನು ಹೊಸದಾಗಿ ಕನ್ನಡ ಪ್ರೇಕ್ಷಕರಿಗೆ ತೋರಿಸಿದ್ದೇ ಇವರಿಬ್ಬರು. ಕಿರಿಕ್ ಪಾರ್ಟಿ ಕೂಡಾ ಅಂತಹದ್ದೇ ಒಂದು ಚಿತ್ರ. ಹೀಗಾಗಿ ಅವರಿಗೆಂದೇ ಒಂದು ಹಾಡನ್ನು ಡೆಡಿಕೇಟ್ ಮಾಡಿದ್ದಾರೆ.
ಹೇ ಹೂ ಆರ್ ಯೂ ಎನ್ನುವ ಹಾಡನ್ನು ಸ್ವತಃ ರಕ್ಷಿತ್ ಶೆಟ್ಟಿ ಬರೆದಿದ್ದಾರೆ. ಈ ಹಾಡನ್ನು ಶಾಂತಿ ಕ್ರಾಂತಿ ಚಿತ್ರದ ಹಾಡಿನಂತೆ ಚಿತ್ರೀಕರಿಸಬೇಕೆಂಬ ಐಡಿಯಾ ಚಿತ್ರ ತಂಡಕ್ಕಿತ್ತಂತೆ. ಆದರೆ ಮುಂದೆ ಸಮಸ್ಯೆಯಾಗಬಹುದೆಂದು ಅದೇ ದಾಟಿಯಲ್ಲಿ ಈ ಹಾಡನ್ನು ರೆಕಾರ್ಡಿಂಗ್ ಮಾಡಿದ್ದಾರೆ. ಯಾಕೆಂದರೆ 90 ರ ದಶಕಗಳ ಚಿತ್ರಗಳು ಈ ಇಬ್ಬರು ಮಹಾನ್ ಕಲಾವಿದರಿಲ್ಲದೇ ಪೂರ್ಣಗೊಳ್ಳದು ಎನ್ನುವುದು ರಕ್ಷಿತ್ ಶೆಟ್ಟಿ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ