Webdunia - Bharat's app for daily news and videos

Install App

ರಜನಿಕಾಂತ್‌ಗೆ ಹಾಜಿಮಸ್ತಾನ್ ಪುತ್ರನಿಂದ ಲೀಗಲ್ ನೋಟಿಸ್ ಜಾರಿ

Webdunia
ಶನಿವಾರ, 13 ಮೇ 2017 (15:37 IST)
ಚಲನಚಿತ್ರದಲ್ಲಿ ಹಾಜಿ ಮಸ್ತಾನ್‌ರನ್ನು ಭೂಗತ ದೊರೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹಾಜಿಮಸ್ತಾನ್ ಪುತ್ರ ಎಂದು ಹೇಳಿಕೊಂಡಿರುವ ಸುಂದರ್ ಶೇಖರ್, ರಜನಿಕಾಂತ್ ಅವರಿಗೆ ಕೋರ್ಟ್‌ನಿಂದ ನೋಟಿಸ್ ಜಾರಿ ಮಾಡಿದ್ದಾರೆ.   
 
ರಜನಿಕಾಂತ್ ತಮ್ಮ ಮುಂದಿನ ಪಾ ರಂಜಿತ್ ಚಿತ್ರದಲ್ಲಿ 1926 ರಿಂದ 1994 ರವರೆಗೆ ಭೂಗತ ದೊರೆಯಾಗಿದ್ದ ಹಾಜಿ ಮಸ್ತಾನ್ ಪಾತ್ರವನ್ನು ಮಾಡಲಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. 
 
ಗಾಡ್‌ಫಾದರ್, ರಾಷ್ಟ್ರಮಟ್ಟದ ರಾಜಕಾರಣಿಯಾಗಿದ್ದ ಹಾಜಿ ಮಸ್ತಾನ್‌ರನ್ನು ಸ್ಮಗಲರ್ ಮತ್ತು ಭೂಗತ ದೊರೆ ಎಂದು ಸಿನೆಮಾದಲ್ಲಿ ತೋರಿಸುತ್ತಿರುವುದು ಅವರಿಗೆ ತೋರಿರುವ ಅಗೌರವವಾಗಿದೆ. ಇದು ಸ್ವೀಕಾರ್ಹವಲ್ಲ ಎಂದು ಮಸ್ತಾನ್ ಪುತ್ರ ರಜನಿಕಾಂತ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. 
 
ಹಾಜಿ ಮಸ್ತಾನ್ ಹಿಂದೆ ದೊಡ್ಡ ರಾಜಕೀಯ ಪಕ್ಷವಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಮಸ್ತಾನ್‌ರನ್ನು ಸ್ಮಗಲರ್ ಮತ್ತು ಭೂಗತ ದೊರೆ ಎಂದು ತೋರಿಸುತ್ತಿರುವುದಕ್ಕೆ ಆಕ್ರೋಶಗೊಂಡಿದ್ದಾರೆ. ಒಂದು ವೇಳೆ ಇಂತಹ ಪ್ರಯತ್ನಗಳು ನಡೆದಲ್ಲಿ ಮುಂದಾಗುವ ಕಾನೂನು ಹೋರಾಟ ಮತ್ತು ಇತರ ತೊಂದರೆಗಳಿಗೆ ನೀವೇ ಹೊಣೆಯಾಗುತ್ತೀರಿ. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.  
 
ಶ್ರೀ ಹಾಜಿ ಮಸ್ತಾನ್ ಜೀವನಶೈಲಿ ಮೇಲೆ ಚಲನಚಿತ್ರಗಳನ್ನು ತಯಾರಿಸಲು ನಿಜವಾಗಿಯೂ ಆಸಕ್ತಿ ಇದ್ದರೆ, ನಾನು ನನ್ನ ದೇವರ ಮೇಲೆ ಬಯೋಪಿಕ್ ಮಾಡಲು ಆಸಕ್ತಿ ಹೊಂದಿದ್ದೇನೆ. ನಾನು  ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್ ಅಜೀವಿತಾವಧಿ ಸದಸ್ಯನಾಗಿದ್ದೇನೆ ಎಂದು ಹಾಜಿ ಮಸ್ತಾನ್ ಪುತ್ರ ಸುಂದರ್ ಶೇಖರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments