Webdunia - Bharat's app for daily news and videos

Install App

ಆಧ್ಯಾತ್ಮಿಕ ಗುರುವನ್ನು ಭೇಟಿಯಾದ ರಜನಿ ಕಾಂತ್

Webdunia
ಶುಕ್ರವಾರ, 29 ಮೇ 2015 (10:18 IST)
ತಮಿಳು ಸೂಪರ್ ಸ್ಟಾರ್ ಆಧ್ಯಾತ್ಮಿಕ ಅಂಶಗಳತ್ತ ಬಹಳ ಆಸಕ್ತಿ ಹೊಂದಿರುವ ಕಲಾವಿದರಾಗಿದ್ದಾರೆ. ಅವರ ಈ ಅಂಶ ಬದುಕಲ್ಲಿ ಸಮಚಿತ್ತವನ್ನು ಬೆಳೆಸಿದೆ. ಸೋಲುಗೆಲುವು ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳದೆ ಇರುವುದಕ್ಕೆ ಈ ಸಂಗತಿ ಕಾರಣವಾಗಿದೆ ಎನ್ನುವ ಅಭಿಮತ ಹೊಂದಿದ್ದಾರೆ ಅವರ ಅಭಿಮಾನಿಗಳು. ನಿನ್ನೆ ಅವರು ಕೊಯಂಬತ್ತೂರಿಗೆ ಬಂದು ಅಲ್ಲಿ ಅವರ ಆಧ್ಯಾತ್ಮಿಕ ಗುರುವಾದ ದಯಾನಂದ ಸರಸ್ವತಿ ಅವರ ಆಶೀರ್ವಾದ ಪಡೆದರು. ಅವರು ಚೆನ್ನೈ ವಿಮಾನದಿಂದ ಬಂದವರು ತಕ್ಷಣ ತಮ್ಮ ಗುರುವಿನ ಬಳಿ ಹೋದರು. ಅವರ ಜೊತೆ ಈ ಸೂಪರ್ಸ್ಟಾರ್ ಒಂದು ಗಂಟೆಗಳನ್ನು ಕಳೆದರು. 
ತಮ್ಮ ಗುರುಗಳ ಆರೋಗ್ಯ ವಿಚಾರಿಸಿ, ಆ ಬಳಿಕ ಅವರೊಂದಿಗೆ ಮಾತುಕತೆ ಆಡಿ ಮಧ್ಯಾಹ್ನ ಅವರೊಂದಿಗೆ ಊಟ ಮಾಡಿದ ಬಗ್ಗೆ ಆಶ್ರಮ ವರ್ಗದಿಂದ ತಿಳಿದುಬಂದಿದೆ. ರಿಷಿಕೇಶದಲ್ಲಿ ಅವರು ಪ್ರತಿವರ್ಷ ತಮ್ಮಗುರುವನ್ನು ಭೇಟಿ ಮಾಡುವ ಅಭ್ಯಾಸ ಹೊಂದಿರುವ ರಜನಿ ಅವರಿಗೆ ಈ ವರ್ಷ ಅಲ್ಲಿಗೆ ಹೋಗಲಾಗದ ಕಾರಣ ಆಶ್ರಮಕ್ಕೆ ಬಂದು ಗುರುಗಳ ಆಶೀರ್ವಾದ ಪಡೆದರು. ಅಲ್ಲದೆ ಆಧ್ಯಾತ್ಮಿಕ ಸಂಗತಿಗಳ ಬಗ್ಗೆ ತಿಳಿದರು ಎಂದು ಆಶ್ರಮದ ಮೂಲಗಳಿಂದ ತಿಳಿದು ಬಂದಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments