Select Your Language

Notifications

webdunia
webdunia
webdunia
webdunia

ಆಧ್ಯಾತ್ಮಿಕ ಗುರುವನ್ನು ಭೇಟಿಯಾದ ರಜನಿ ಕಾಂತ್

ಆಧ್ಯಾತ್ಮಿಕ ಗುರುವನ್ನು ಭೇಟಿಯಾದ ರಜನಿ ಕಾಂತ್
, ಶುಕ್ರವಾರ, 29 ಮೇ 2015 (10:18 IST)
ತಮಿಳು ಸೂಪರ್ ಸ್ಟಾರ್ ಆಧ್ಯಾತ್ಮಿಕ ಅಂಶಗಳತ್ತ ಬಹಳ ಆಸಕ್ತಿ ಹೊಂದಿರುವ ಕಲಾವಿದರಾಗಿದ್ದಾರೆ. ಅವರ ಈ ಅಂಶ ಬದುಕಲ್ಲಿ ಸಮಚಿತ್ತವನ್ನು ಬೆಳೆಸಿದೆ. ಸೋಲುಗೆಲುವು ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳದೆ ಇರುವುದಕ್ಕೆ ಈ ಸಂಗತಿ ಕಾರಣವಾಗಿದೆ ಎನ್ನುವ ಅಭಿಮತ ಹೊಂದಿದ್ದಾರೆ ಅವರ ಅಭಿಮಾನಿಗಳು. ನಿನ್ನೆ ಅವರು ಕೊಯಂಬತ್ತೂರಿಗೆ ಬಂದು ಅಲ್ಲಿ ಅವರ ಆಧ್ಯಾತ್ಮಿಕ ಗುರುವಾದ ದಯಾನಂದ ಸರಸ್ವತಿ ಅವರ ಆಶೀರ್ವಾದ ಪಡೆದರು. ಅವರು ಚೆನ್ನೈ ವಿಮಾನದಿಂದ ಬಂದವರು ತಕ್ಷಣ ತಮ್ಮ ಗುರುವಿನ ಬಳಿ ಹೋದರು. ಅವರ ಜೊತೆ ಈ ಸೂಪರ್ಸ್ಟಾರ್ ಒಂದು ಗಂಟೆಗಳನ್ನು ಕಳೆದರು. 
ತಮ್ಮ ಗುರುಗಳ ಆರೋಗ್ಯ ವಿಚಾರಿಸಿ, ಆ ಬಳಿಕ ಅವರೊಂದಿಗೆ ಮಾತುಕತೆ ಆಡಿ ಮಧ್ಯಾಹ್ನ ಅವರೊಂದಿಗೆ ಊಟ ಮಾಡಿದ ಬಗ್ಗೆ ಆಶ್ರಮ ವರ್ಗದಿಂದ ತಿಳಿದುಬಂದಿದೆ. ರಿಷಿಕೇಶದಲ್ಲಿ ಅವರು ಪ್ರತಿವರ್ಷ ತಮ್ಮಗುರುವನ್ನು ಭೇಟಿ ಮಾಡುವ ಅಭ್ಯಾಸ ಹೊಂದಿರುವ ರಜನಿ ಅವರಿಗೆ ಈ ವರ್ಷ ಅಲ್ಲಿಗೆ ಹೋಗಲಾಗದ ಕಾರಣ ಆಶ್ರಮಕ್ಕೆ ಬಂದು ಗುರುಗಳ ಆಶೀರ್ವಾದ ಪಡೆದರು. ಅಲ್ಲದೆ ಆಧ್ಯಾತ್ಮಿಕ ಸಂಗತಿಗಳ ಬಗ್ಗೆ ತಿಳಿದರು ಎಂದು ಆಶ್ರಮದ ಮೂಲಗಳಿಂದ ತಿಳಿದು ಬಂದಿದೆ. 

Share this Story:

Follow Webdunia kannada