ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ 2015ರಲ್ಲಿ ಬಂದ ಬಾಹುಬಲಿ ಚಿತ್ರ ಇಡೀ ಭಾರತೀಯ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿತು. ಈ ಚಿತ್ರ ಹಿಂದಿ, ಮಲಯಾಳಂ, ಫ್ರೆಂಚ್, ಜರ್ಮನ್ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿದೆ. ಈಗ ಬಾಹುಬಲಿ 2 ಬರುತ್ತಿದೆ. ಅದಾದ ಬಳಿಕ ರಾಜಮೌಳಿ ಯಾವ ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಚರ್ಚೆ ಈಗ ನಡೆಯುತ್ತಿದೆ.
ಈ ಹಿಂದೆ ರಾಜಮೌಳಿ ಮಾತನಾಡುತ್ತಾ, ಮಹಾಭಾರತ ಕಥೆಯನ್ನು ಯಾರೂ ಊಹಿಸದಷ್ಟು ಅದ್ದೂರಿಯಾಗಿ ತೆರೆಗೆ ತರಬೇಕೆಂಬ ಆಸೆ ಇದೆ ಎಂದು ಹೇಳಿದ್ದರು. ಅಮೀರ್ ಖಾನ್ ತಾನು ಕೃಷ್ಣನಾಗಿ ಕಾಣಿಸಬೇಕೆಂದಿದ್ದೇನೆಂದು ಹೇಳಿದ್ದರು. ಅದೇ ರೀತಿ ಶಾರುಖ್ ಖಾನ್ ಕರ್ಣನ ಪಾತ್ರ ಪೋಷಿಸಲು ಸಿದ್ಧರಿರುವುದಾಗಿ ಹೇಳಿದ್ದರು. ತನ್ನ ಸ್ವಂತ ನಿರ್ಮಾಣ ಸಂಸ್ಥೆ ಮೂಲಕ ಚಿತ್ರ ನಿರ್ಮಿಸುವುದಾಗಿಯೂ ಶಾರುಖ್ ಹೇಳಿದ್ದರು.
ಆದರೆ ರಾಜಮೌಳಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ. ಸಾವಿರ ಕೋಟಿ ಬಜೆಟ್ನ ಈ ಸಿನಿಮಾಗೆ ಮೂರು ವರ್ಷಗಳ ಕಾಲ ಕೆಲಸ ಮಾಡಬೇಕಾಗುತ್ತದಂತೆ. ಚಿತ್ರಕ್ಕೆ ಗರುಡ ಎಂದು ಹೆಸರಿಡುವುದಾಗಿಯೂ ಹೇಳಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ನಟಿಸುವ ಸಾಧ್ಯತೆಗಳಿವೆ. ಸ್ವಲ್ಪ ದಿನ ಕಾದರೆ ಎಲ್ಲವೂ ಗೊತ್ತಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.