Webdunia - Bharat's app for daily news and videos

Install App

ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ

Webdunia
ಗುರುವಾರ, 20 ಏಪ್ರಿಲ್ 2017 (13:51 IST)
ಕಾವೇರಿ ನದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ಚಿತ್ರವನ್ನ ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಕನ್ನಡಿಗರು ಹೇಳಿರುವ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ರಾಜಮೌಳಿ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದು, ಸತ್ಯರಾಜ್ ಅವರದ್ದು ಅವರ ವ್ಯಕ್ತಿಗತ ಅಭಿಪ್ರಾಯ. ಅದಕ್ಕೂ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

`ಸತ್ಯರಾಜ್ ಅವರ ವಿವಾದದ ಬಗ್ಗೆ ನಾನು ಮತ್ತು ನಿರ್ಮಾಪಕರು ನಿಮಗೊಂದು ಕ್ಲಾರಿಫಿಕೇಶನ್ ಕೊಡಲು ಇಚ್ಛಿಸುತ್ತೇವೆ. ಕೆಲ ವರ್ಷಗಳ ಹಿಂದೆ ಸತ್ಯರಾಜ್ ಮಾಡಿರುವ ಕಮೆಂಟ್ ಮತ್ತು ನಮಗೂ ಯಾವುದೇ ಸಂಬಂಧವಿಲ್ಲ. ಅದು ಕೇವಲ ಸತ್ಯಜಿತ್ ಅವರ ವ್ಯಕ್ತಿಗತ ಅಭಿಪ್ರಾಯ. 1 ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೊಡುವವರೆಗೂ ನಮಗೆ ಈ ವಿಷಯ ತಿಳಿದಿರಲಿಲ್ಲ. ಅವರು ಈ ಕಾಮೆಂಟ್ ಮಾಡಿ 9 ವರ್ಷ ಕಳೆದಿದೆ. ಆಮೇಲೆ ಅವರು ನಟಿಸಿ, ನಿರ್ಮಿಸಿರುವ ಎಷ್ಟೋ ಚಿತ್ರಗಳು ಕರ್ನಾಟಕದಲ್ಲಿ ರಿಲೀಸ್ ಆಗಿವೆ. ಬಾಹುಬಲಿ-1 ಸಹ ರಿಲೀಸ್ ಆಗಿದೆ. ಅದಕ್ಕೆಲ್ಲ ನೀವು ಹೇಗೆ ಆದರಿಸಿದ್ದೀರೋ ಅದೇ ರೀತಿ ಬಾಹುಬಲಿ ಪಾರ್ಟ್-2 ಸಹ ಆದರಿಸಬೇಕೆಂದು ಮನವಿ ಮಾಡುತ್ತಿದ್ದೇವೆ. ಸತ್ಯರಾಜ್ ಅವರು ಈ ಚಿತ್ರದ ನಿರ್ಮಾಪಕರೂ ಅಲ್ಲ, ನಿರ್ದೇಶಕರೂ ಅಲ್ಲ. ಚಿತ್ರದಲ್ಲಿ ಅನೇಕ ಕಲಾವಿದರಲ್ಲಿ ಅವರೂ ಒಬ್ಬರು. ಈ ಸಿನಿಮಾ ನಿಲ್ಲಿಸಿದರೆ ಸತ್ಯರಾಜ್`ಗೆ ಯಾವುದೇ ನಷ್ಟವಿಲ್ಲ. ಅವರ ಮೇಲಿನ ಸಿಟ್ಟನ್ನ ಚಿತ್ರದ ಮೇಲೆ ತೋರಿಸುವುದು ಸರಿಯಲ್ಲ. ಸತ್ಯರಾಜ್ ಅವರಿಗೆ ಫೋನ್ ಕರೆ ಮಾಡಿ ಪರಿಸ್ಥಿತಿ ತಿಳಿಸಿದ್ದೇವೆ. ಅದರ ಮೇಲೆ ಏನೂ ಮಾಡುವುದಕ್ಕೂ ನಮಗೆ ಶಕ್ತಿ ಇಲ್ಲ. ನಮಗೆ ಸಂಬಂಧವಿಲ್ಲದ ಈ ವಿಷಯದಲ್ಲಿ ನಮ್ಮನ್ನ ಸೇರಸಿಬಾರದೆಂದು ಮನವಿ ಮಾಡುತ್ತೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಬೇಕೆಂಬುದು ನಮ್ಮ ಆಸೆ’ ಎಂದು ರಾಜಮೌಳಿ ಹೇಳಿದ್ದಾರೆ.

 


ಇದನ್ನೂ ಓದಿ.. ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡಿದರೆ ಸತ್ತೇ ಹೋಗ್ತೀನಿ: ಪ್ರಭಾಸ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments