Webdunia - Bharat's app for daily news and videos

Install App

ನಟಿ ರಾಗಿಣಿ ನಾಗಿಣಿ ಡ್ಯಾನ್ಸ್ ಫೋಟೋ ರಿಲೀಸ್

Webdunia
ಮಂಗಳವಾರ, 3 ಜನವರಿ 2017 (12:52 IST)
ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ `ಉಪ್ಪು ಹುಳಿ ಖಾರ’. ಈ ಚಿತ್ರದ ವಿಶೇಷವಾದ ಹಾಡೊಂದರಲ್ಲೀಗ ರಾಗಿಣಿ ದ್ವಿವೇದಿ ಅವರು ಹೆಜ್ಜೆ ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ.
 
ಈ ಹಿಂದೆ ತುಪ್ಪ ಬೇಕಾ ತುಪ್ಪ, ಯಕ್ಕಾ ನಿನ್ ಮಗಳು ನಂಗೆ ಮುಂತಾದ ಎನರ್ಜಿಟಿಕ್ ಸಾಂಗ್‍ಗಳಲ್ಲಿ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ರಾಗಿಣಿ ನಟಿಸಿದ್ದರು. ಆ ಹಾಡುಗಳೆಲ್ಲ ಹುಚ್ಚೆಬ್ಬಿಸಿದ್ದವು. ಇದೀಗ ತಮ್ಮದೇ ನಿರ್ದೇಶನದ ಚಿತ್ರದ ಹಾಡೊಂದರಲ್ಲಿ ನಟಿಸುವಂತೆ ಇಮ್ರಾನ್ ಸರ್ದಾರಿಯಾ ಅವರು ಕೇಳಿಕೊಂಡಾಗ ರಾಗಿಣಿ ಸಂತೋಷದಿಂದಲೇ ಒಪ್ಪಿ ಹೆಜ್ಜೆ ಹಾಕಿದ್ದಾರೆ.
 
ಗಿನ್ ಗಿನ್ ನಾಗಿನ್ ಚಾಚು ಚಾಚು ನಾಲಿಗೇನ, ದೋಚು ದೋಚು ನಶೆಯನ್ನ ಎಂಬ ಹಾಡಿನಲ್ಲಿ ರಾಗಿಣಿ ನಾಗಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡೂ ಕೂಡಾ ಉಪ್ಪು ಹುಳಿ ಖಾರ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಬಿಂಬಿತವಾಗಿದೆ.
 
ತೇಜಸ್ವಿನಿ ಎಂಟೆಪ್ರ್ರೈಸಸ್ ಅಡಿಯಲ್ಲಿ  ರಮೇಶ್ ರೆಡ್ಡಿ (ನಂಗ್ಲಿ) ನಿರ್ಮಾಣ ಮಾಡುತ್ತಿರುವ `ಉಪ್ಪು ಹುಳಿ ಖಾರ' ಸಿನಿಮಾದ ಛಾಯಾಗ್ರಾಹಣ ನಿರಂಜನ್ ಬಾಬು ಅವರದು. `ಉಪ್ಪು ಹುಳಿ ಖಾರ' ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರುಗಳು. 
 
ಜೂಡೋ ಸ್ಯಾಂಡಿ ಅವರು ಮೂರು ಹಾಡುಗಳನ್ನು, ಕಿಶೋರ್ ಹಾಗೂ ಪ್ರಜ್ವಲ್ ಪೈ ಅವರು ತಲಾ ಒಂದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿಜದ್ದಾರೆ. ತಾರಾಗಣದಲ್ಲಿ ಮಾಲಾಶ್ರೀ ಅವರ ಸ್ಪೆಷಲ್ ಪಾತ್ರದ ಜೊತೆಗೆ ಅನುಶ್ರೀ, ಜಯಶ್ರೀ, ಮಾಷ (ಉಕ್ರೈನ್ ದೇಶದ ನಟಿ), ಶರತ್, ಧನಂಜಯ್, ಶಶಿ ಹಾಗೂ ಇನ್ನಿತರ ಹೊಸಬರ ದಂಡೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments