Webdunia - Bharat's app for daily news and videos

Install App

ಯಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ಮುದ್ದು ಚೆಲುವೆ ರಾಧಿಕಾ ಪಂಡಿತ್

Webdunia
ಗುರುವಾರ, 2 ಜುಲೈ 2015 (10:03 IST)
ಯಶ್ ಹಾಗೂ ರಾಧಿಕಾ ಇಬ್ಬರೂ ಕಿರುತೆರೆ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯಲ್ಲಿರುವ ನಟ-ನಟಿ. ರಾಧಿಕಾ-ಯಶ್ ನಡುವೆ ಸಂಥಿಂಗ್ ಸಂಥಿಂಗ್ ಇದೇ ಅನ್ನೋ ರೂಮರ್ ಗಳು  ಬಹಳ ವರ್ಷದಿಂದ ಕೇಳಿ ಬರುತ್ತಲೇ ಇತ್ತು. ಆದ್ರೆ ಇಷ್ಟು ದಿನ ಯಶ್ ಬಗ್ಗೆ ತಿ ಪಿಟಿಕ್ ಅನ್ನದ ರಾಧಿಕಾ ಇದೇ ಮೊದಲ ಬಾರಿಗೆ ಯಶ್ ಬಗ್ಗೆ ಫೇಸ್ ಬುಕ್ ಪೇಜ್ ನಲ್ಲಿ ಮನ ಬಿಚ್ಚಿ ಕೆಲವೊಂದು ವಿಷಯಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾಳೆ.
ನಾನು ಹಾಗೂ ಯಶ್ ಇಬ್ಬರೂ ಕಿರುತೆರೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು. ಅವನೊಬ್ಬ ಹಾರ್ಡ್ ವರ್ಕರ್. ನಾನು ಅವನ ಜೀವನದ ಪ್ರತಿ ಕ್ಷಣಗಳನ್ನು ನೋಡಿದ್ದೇನೆ. ಆತ ಸೋತಾಗಲೂ ನಾನು ಅವನೊಂದಿಗಿದ್ದೆ, ಗೆದ್ದಾಗಲೂ ನಾನು ಅವನೊಂದಿಗಿದ್ದೆ. ಅವನು ಸೋಲು-ಗೆಲುವು ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ ಎಂದು ರಾಧಿಕಾ ಹೇಳಿಕೊಂಡಿದ್ದಾಳೆ.
 
ಯಶ್ ಗೆ ಆತನ ಕೆಲಸದ ಬಗ್ಗೆ ವಿಶೇಷ ಒಲವು. ಎಲ್ಲಾ ಸಿನಿಮಾಗಳಿಗೂ ಆತ ಹಾರ್ಡ್ ವರ್ಕ್ ಮಾಡುತ್ತಾನೆ. ಯಾವುದೇ ಪಾತ್ರವಾದ್ರೂ ಅದನ್ನು ಅಷ್ಟೇ ಶ್ರದ್ಧೆಯಿಂದ ಮಾಡುತ್ತಾನೆ. ಯಾವತ್ತೂ ಒಳ್ಳೆ ವ್ಯಕ್ತಿಗಳು ಒಳ್ಳೆ ನಟರಾಗ್ತಾರೆ. ಹಾಗೇ ಯಶ್ ಕೂಡ. ಸದ್ಯ ಯಶಸ್ಸಿನಲ್ಲಿ ಉತ್ತುಂಗದಲ್ಲಿರುವ ಯಶ್ ಗೆ ನಾನು ಆತನ ಒಳ್ಳೆ ಫ್ರೆಂಡ್ ಆಗಿ ಶುಭಾಶಯ ಕೋರುತ್ತೇನೆ ಅಂತಾ ರಾಧಿಕಾ ಹೇಳಿದ್ದಾಳೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments