Select Your Language

Notifications

webdunia
webdunia
webdunia
webdunia

ಯಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ಮುದ್ದು ಚೆಲುವೆ ರಾಧಿಕಾ ಪಂಡಿತ್

ಯಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ಮುದ್ದು ಚೆಲುವೆ ರಾಧಿಕಾ ಪಂಡಿತ್
, ಗುರುವಾರ, 2 ಜುಲೈ 2015 (10:03 IST)
ಯಶ್ ಹಾಗೂ ರಾಧಿಕಾ ಇಬ್ಬರೂ ಕಿರುತೆರೆ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯಲ್ಲಿರುವ ನಟ-ನಟಿ. ರಾಧಿಕಾ-ಯಶ್ ನಡುವೆ ಸಂಥಿಂಗ್ ಸಂಥಿಂಗ್ ಇದೇ ಅನ್ನೋ ರೂಮರ್ ಗಳು  ಬಹಳ ವರ್ಷದಿಂದ ಕೇಳಿ ಬರುತ್ತಲೇ ಇತ್ತು. ಆದ್ರೆ ಇಷ್ಟು ದಿನ ಯಶ್ ಬಗ್ಗೆ ತಿ ಪಿಟಿಕ್ ಅನ್ನದ ರಾಧಿಕಾ ಇದೇ ಮೊದಲ ಬಾರಿಗೆ ಯಶ್ ಬಗ್ಗೆ ಫೇಸ್ ಬುಕ್ ಪೇಜ್ ನಲ್ಲಿ ಮನ ಬಿಚ್ಚಿ ಕೆಲವೊಂದು ವಿಷಯಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾಳೆ.
ನಾನು ಹಾಗೂ ಯಶ್ ಇಬ್ಬರೂ ಕಿರುತೆರೆ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು. ಅವನೊಬ್ಬ ಹಾರ್ಡ್ ವರ್ಕರ್. ನಾನು ಅವನ ಜೀವನದ ಪ್ರತಿ ಕ್ಷಣಗಳನ್ನು ನೋಡಿದ್ದೇನೆ. ಆತ ಸೋತಾಗಲೂ ನಾನು ಅವನೊಂದಿಗಿದ್ದೆ, ಗೆದ್ದಾಗಲೂ ನಾನು ಅವನೊಂದಿಗಿದ್ದೆ. ಅವನು ಸೋಲು-ಗೆಲುವು ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ ಎಂದು ರಾಧಿಕಾ ಹೇಳಿಕೊಂಡಿದ್ದಾಳೆ.
 
ಯಶ್ ಗೆ ಆತನ ಕೆಲಸದ ಬಗ್ಗೆ ವಿಶೇಷ ಒಲವು. ಎಲ್ಲಾ ಸಿನಿಮಾಗಳಿಗೂ ಆತ ಹಾರ್ಡ್ ವರ್ಕ್ ಮಾಡುತ್ತಾನೆ. ಯಾವುದೇ ಪಾತ್ರವಾದ್ರೂ ಅದನ್ನು ಅಷ್ಟೇ ಶ್ರದ್ಧೆಯಿಂದ ಮಾಡುತ್ತಾನೆ. ಯಾವತ್ತೂ ಒಳ್ಳೆ ವ್ಯಕ್ತಿಗಳು ಒಳ್ಳೆ ನಟರಾಗ್ತಾರೆ. ಹಾಗೇ ಯಶ್ ಕೂಡ. ಸದ್ಯ ಯಶಸ್ಸಿನಲ್ಲಿ ಉತ್ತುಂಗದಲ್ಲಿರುವ ಯಶ್ ಗೆ ನಾನು ಆತನ ಒಳ್ಳೆ ಫ್ರೆಂಡ್ ಆಗಿ ಶುಭಾಶಯ ಕೋರುತ್ತೇನೆ ಅಂತಾ ರಾಧಿಕಾ ಹೇಳಿದ್ದಾಳೆ.

Share this Story:

Follow Webdunia kannada