Select Your Language

Notifications

webdunia
webdunia
webdunia
webdunia

ಕಾಲಿವುಡ್‌ನಲ್ಲಿ ಮತ್ತೆ ಅವಕಾಶ ಗಿಟ್ಟಿಸಿಕೊಂಡ ಪ್ರಿಯಾಮಣಿ

ಕಾಲಿವುಡ್‌ನಲ್ಲಿ ಮತ್ತೆ ಅವಕಾಶ ಗಿಟ್ಟಿಸಿಕೊಂಡ ಪ್ರಿಯಾಮಣಿ
, ಬುಧವಾರ, 1 ಏಪ್ರಿಲ್ 2015 (10:19 IST)
ಬೆಂಗಳೂರಿನ ಹುಡುಗಿ ಪ್ರಿಯಾಮಣಿ ಕಾಲಿವುಡ್‌ನಲ್ಲಿ ತನ್ನ ಉಜ್ವಲ ಕೆರಿಯರ್ ಆರಂಭ ಮಾಡಿಕೊಂಡಳಾದರೂ ಆಕೆಯು ಆತುರ ನಿರ್ಧಾರದಿಂದ ಅವಕಾಶಗಳನ್ನು ಕಳೆದು ಕೊಂಡಳು. ಆ ಬಳಿಕ ಆಕೆ ಕನ್ನಡ, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಳು. ಈಗ ಮತ್ತೆ ಆಕೆ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾಳೆ. 
ಒಂದು ಭಿನ್ನವಾದ ಕಥೆಯಲ್ಲಿ ನಟಿಸಲು ಆಕೆ ಸಿದ್ಧವಾಗಿದ್ದಾಳೆ. ಕನ್ಗಲಾಳ್ಖೈದುಸೆಯ್ ಚಿತ್ರದ ಮೂಲಕ ಆಕೆ ಕಾಲಿವುಡ್ ಚಿತ್ರರಂಗಕ್ಕೆ ಆಕೆ ಆಯ್ಕೆ ಆಡಲು. ಆ ಚಿತ್ರದ ಮೂಲಕ ನಿರ್ದೇಶಕ ಭಾರತಿರಾಜ ಅವರು ಪ್ರಿಯಾಮಣಿ ಯನ್ನು ಕಾಲಿವುಡ್ ನಲ್ಲಿ ಆಕೆಯ ಆಗಮನಕ್ಕೆ ದಾರಿ ಮಾಡಿಕೊಟ್ಟರು. ಆ ಚಿತ್ರದಲ್ಲಿ ಆಕೆಗೆ ಹೇಳಿಕೊಳ್ಳುವಂತಹ ಯಶಸ್ಸು ದೊರಕದೆ ಇದ್ದರೂ ಸಹಿತ ಆ ಬಳಿಕ ಆಕೆ ನಟಿಸಿದ ಪರುತ್ತಿವೀರನ್ ಚಿತ್ರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಿಕೆ ಹೊಂದಿದ್ದಲ್ಲದೆ, ರಾಷ್ಟ್ರೀಯ ಪ್ರಶಸ್ತಿ  ಪಡೆಯುವಂತೆ ಮಾಡಿತು. ಪರುತ್ತಿವೀರನ್ ಚಿತ್ರದಲ್ಲಿ ಮುತ್ತಳಗಿ ಆಗಿ ನಟಿಸಿ ಆ ಪಾತ್ರಕ್ಕೆ ಜೀವ ತುಂಬಿದ್ದಳು ಆ ತಾರೆ.ಆ ಬಳಿಕ ಆಕೆ ಹೆಚ್ಚು ತನ್ನ ರಾಶಿ ರಾಶಿ ರೂಪವನ್ನು ಬಿಚ್ಚಿ ತೋರುವುದರ ಮೂಲಕ ತನಗೆ ದೊರೆತ ಅವಕಾಶಗಳನ್ನು ದೂರ ಮಾಡಿಕೊಂಡಳು.  
 
ತಮಿಳಿನಲ್ಲಿ ಆಕೆ ನಟನೆ ಮಾಡಿದ ಕೊನೆಯ ಚಿತ್ರ ರಾವಣನ್. ಆ ಚಿತ್ರವೂ ಸಹಿತ ಹೇಳಿ ಕೊಳ್ಳುವ ಫಲಿತ ನೀಡಲಿಲ್ಲ.ಆ ಚಿತ್ರ ಹಿಂದಿಗೆ ಬಂದರೂ ಸಹಿತ ಅಲ್ಲಿ ಸಹಿತ ಆಕೆಯನ್ನು ಕ್ಯಾಮಾ ಎಂದು ಗುರುತಿಸಲು ಹೋಗಲಿಲ್ಲ! ಆ ಬಳಿಕ ಕನ್ನಡದ ಚಾರುಲತ ತಮಿಳಿಗೆ ರೀಮೇಕ್ ಆದರೂ ಸಹಿತ ಅಲ್ಲಿಯೂ ಗೆಲ್ಲಲಿಲ್ಲ. ಅಂತಹ  ಪರಿಸ್ಥಿಯಲ್ಲಿ ಇರುವಾಗ ಬಹಳ ಕಾಲದ ಬಳಿಕ ಆಕೆಗೆ ನಿರ್ದೇಶಕ ರಾಮ್ಕು ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ. 
 
ಈ ಚಿತ್ರಕ್ಕೆ ನಿರ್ದೇಶಕ ಮಿಶ್ಕಿನ್ ಕಥೆ ನೀಡಿದರೂ ಖಳನಾಯಕರಾಗಿ ಅಭಿನಯಿಸುತ್ತಿದ್ದಾರೆ. ಆದರೆ ಈ ಮೊದಲು ಆತ ನಂದಲಾಲ, ಒನಾಯಮ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿ ಆಗಿದ್ದಾರೆ. ಮಿಶ್ಕಿನ್ ಅವರ ಶಿಷ್ಯ ಜಿ.ಇ.ಆದಿತ್ಯ ಅವರು ನಿರ್ದೇಶಕರಾಗಿ ಈ ಚಿತ್ರದ ಮೂಲಕ ಪರಿಚಯ ಆಗುತ್ತಿದ್ದಾರೆ. ಈ ಚಿತ್ರದ ಕೆಲಸ ಜೂನ್ 15 ರಿಂದ ಆರಂಭ ಆಗಲಿದೆ. ಈ ಚಿತ್ರದ ಮೂಲಕ ಪ್ರಿಯಾಮಣಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾಳೆ.  

Share this Story:

Follow Webdunia kannada