Webdunia - Bharat's app for daily news and videos

Install App

ಪ್ರಕಾಶ್ ರಾಜ್ ಪ್ರಸ್ತುತ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ...?

Webdunia
ಗುರುವಾರ, 29 ಜನವರಿ 2015 (09:56 IST)
ಭಾರತೀಯ ಚಿತ್ರರಂಗದ ಭಿನ್ನ ಕಲಾವಿದ ಪ್ರಕಾಶ್ ರಾಜ್. ಅನೇಕ ರೀತಿಯ ವಿವಾದಗಳ ಸುಳಿಯಲ್ಲಿ ತಾನು ಸಿಲುಕಿದರೂ ಸಹಿತ ಯಾವುದೇ ರೀತಿಯಲ್ಲೂ ಅದಕ್ಕೆ ಹೆದರದ ಅಭಿಜಾತ ಪ್ರತಿಭೆ ಪ್ರಕಾಶ್ ರಾಜ್. ಈಗ ಹೈದಾರಾಬಾದ್ ನಲ್ಲಿ ಅವರು ನೆಲೆಸಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದರ ಬಗ್ಗೆ ಟ್ವೀಟ್  ಮಾಡಿ ತಿಳಿಸಿದ್ದಾರೆ. ಈಗ ಅಲ್ಲಿ ಸಿಕ್ಕಾಪಟ್ಟೆ ಚಳಿ ಇರುವುದರಿಂದ ಪ್ರಕಾಶ್ ರಾಜ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದನ್ನು ಅವರು ಟ್ವೀಟ್  ಮಾಡಿ  ತಿಳಿಸಿದ್ದಾರೆ. ತಮಗೆ ಫ್ಲೂ ಜ್ವರ ಇರುವ ಕಾರಣ ತಾವು ಹೈದರಾಬಾದ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.  
ಮೂರು ದಿನ ವಿಶ್ರಾಂತಿ ಪಡೆಯ ಬೇಕು ಎಂದು ಹೇಳಿದ್ದಾರಂತೆ  ವೈದ್ಯರು ಪ್ರಕಾಶ್ ರಾಜ್  ಅವರಿಗೆ. ಡಾಕ್ಟರ ಸಲಹೆಯ ಮೇರೆಗೆ ತಾನು ಮೂರು ದಿನಗಳ ಕಾಲ ಬೆಡ್ ರೆಸ್ಟ್ ತಗೋತಾ ಇದ್ದೀನಿ ಎಂದು  ಹೇಳಿದ್ದಾರೆ. ಈಗ ಟೆಂಪರ್  ಚಿತ್ರದ ಪ್ಯಾಚ್ ವರ್ಕ್ ಗಾಗಿ ಹೈದರಾಬಾದ್ ನಲ್ಲಿ ಇದ್ದಾರೆ. ಟೆಂಪರ್ ಚಿತ್ರದಲ್ಲಿ ಖಳನಟನ ಪಾತ್ರಧಾರಿ ಆಗಿದ್ದಾರೆ. 
 
ಮಣಿರತ್ನಂ ಅವರ ಹೊಸ ಪ್ರಾಜಕ್ಟ್ ಓಕೆ ಬಂಗಾರಂ, ರುದ್ರಮದೇವಿ ಚಿತ್ರಗಳ ಮೂಲಕ ಮತ್ತೆ  ಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ತಮ್ಮ ಫಾರ್ಮ್  ಹೆಚ್ಚಿಸಿಕೊಂಡಿದ್ದಾರೆ. ಅದರ ನಡುವೆ ರಾಮ್ ಗೋಪಾಲ್ ವರ್ಮ ಅವರ ನಿರ್ದೇಶನ ಚಿತ್ರಕ್ಕೂ ಸಹಿತ ಆಯ್ಕೆಯಾಗಿದ್ದಾರೆ. ಒಂದು ಕಡೆ ಟಾಪ್ ಹೀರೋಗಳ ಚಿತ್ರಗಳಲ್ಲಿ ಮುಖ್ಯ ಪೋಷಕ ನಟನಾಗಿ ನಟಿಸುತ್ತಾ ಮತ್ತೊಂದು ಕಡೆ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ ಪ್ರಕಾಶ್ ರಾಜ್. ಈ ಮೂಲಕ ತಾನೆಷ್ಟು ರಂಗಭೂಮಿ ಪ್ರಿಯ ಎನ್ನುವುದು ಇದರಿಂದ ತಿಳಿಯುತ್ತದೆ.   
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments