Webdunia - Bharat's app for daily news and videos

Install App

ಅಭಿನೇತ್ರಿಗಾಗಿ ಸಾಕಷ್ಟು ರಿಸರ್ಚ್ ಮಾಡಿದ್ದಾರಂತೆ ಪೂಜಾ ಮೇಡಮ್ಮು !

Webdunia
ಶನಿವಾರ, 24 ಜನವರಿ 2015 (10:22 IST)
ಅಂತೂ ಇಂತೂ ಅಭಿನೇತ್ರಿಗೆ  ಕಾಲ ಬಂತು  ಎಂದು ಮಾತನಾಡಿ  ಕೊಳ್ಳುತ್ತಿದ್ದಾರೆ ಗಾಂಧಿನಗರವಾಸಿಗಳು. ಮುಖ್ಯವಾಗಿ ಹೀಗೆ ಯಾಕೆ ಆರಂಭ ಮಾಡಿದ್ದೇವೆ ಎನುವುದರ ಅರಿವು ನಿಮಗೆ ಈಗಾಗಲೆ ಆಗಿರ ಬಹುದು. ನಿಮ್ಮ ಎಣಿಕೆ ಸತ್ಯ ಅಭಿನೇತ್ರಿಯ ಬಿಡುಗಡೆಯ ಕಾಲ ಸನ್ನಿಹಿತವಾಗಿದೆ. ಆಕೆ ತನ್ನ ಫೇಸ್ಬುಕ್ ಪೇಜ್ ನಲ್ಲಿ ಆ ಬಗ್ಗೆ ಇತ್ತೀಚಿಗೆ ಹೇಳಿದ್ದರು. ಎಲ್ಲವು ಈಗ ಸರಿಯಾಗಿದ್ದು ಈ ಚಿತ್ರ ಇದೆ ತಿಂಗಳು 30 ರಂದು ಬಿಡುಗಡೆ ಭಾಗ್ಯ ಕಾಣಲಿದೆ. ಈ ಚಿತ್ರವನ್ನು ತಯಾರಿಸುವ ಮುನ್ನ ಕನ್ನಡದ ಪ್ರಸಿದ್ದ ನಿರ್ದೇಶಕರ ಜೊತೆ ಮಾತಾಡಿ ರಿಸರ್ಚ್ ಮಾಡಿ ಆ ಬಳಿಕ ಮುಂದಿನ ಹೆಜ್ಜೆ ಇಡಲಾಯಿತಂತೆ   ಹಾಗಂತ ನಟಿ ಪೂಜಾ ಗಾಂಧಿ ಹೇಳಿದ್ದಾರೆ. 
ನಮ್ಮ ತಂಡ ಹಳೆಯ ನಿರ್ದೇಶಕರಾದ  ಎಸ್ ಕೆ ಭಗವಾನ್, ಕೆ ಎಸ್ ಎಲ್ ಸ್ವಾಮಿ, ಪಿ ಹೆಚ್ ವಿಶ್ವನಾಥ್ ಮುಂತಾದವರ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ. ಆ ಬಳಿಕ ಚಿತ್ರ ಕಥೆಯನ್ನು ಸಿದ್ಧ ಮಾಡಲಾಯಿತು. ಇದು ಹಿರಿಯ ನಟಿ ದಿವಂಗತ ಕಲ್ಪನಾ ಅವರ ಬದುಕನ್ನು ಆಧಾರವಾಗಿ ಇಟ್ಟುಕೊಂಡು ರಚಿಸಲಾಗಿದೆ. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಉತ್ತರ ಕರ್ನಾಟಕದ ಅನೇಕ ನಾಟಕ ಕಂಪನಿಗಳಿಗೆ ಹೋಗಿ ಅಲ್ಲಿಯೂ ಸಹಿತ ಮಾಹಿತಿ ಪಡೆದೆವು ಎಂದು ಹೇಳಿದ್ದಾರೆ. ಅಭಿನೇತ್ರಿ ಚಿತ್ರದಲ್ಲಿ ಪೂಜಾ ಗಾಂಧಿ, ಅತುಲ್ ಕುಲಕರ್ಣಿ, ರವಿಶಂಕರ್,ಮಾರ್ಕಂಡ್ ದೇಶಪಾಂಡೆ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸತೀಶ್ ಪ್ರಧಾನ್  ಅವರು ನಿರ್ದೇಶನ ಮಾಡಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments