ಮನುಷ್ಯರು ಬಣ್ಣ ಬದಲಾಯಿಸಿದರೇನು.. ದರ್ಶನ್ ಗೆ ಟಾಂಗ್ ಕೊಟ್ಟರಾ ಪವಿತ್ರಾ ಗೌಡ

Krishnaveni K
ಗುರುವಾರ, 31 ಜುಲೈ 2025 (11:21 IST)

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈವತ್ತು ಮನುಷ್ಯರೂ ಬಣ್ಣ ಬದಲಾಯಿಸಿದರೇನು ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ದರ್ಶನ್ ಗೆ ಟಾಂಗ್ ಕೊಟ್ಟರಾ ಎಂಬ ಅನುಮಾನ ಮೂಡುತ್ತಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೇ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ ಗೆ ಕರೆಸಿ ದರ್ಶನ್ ಆಂಡ್ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಆತ ಸಾವನ್ನಪ್ಪಿದ ಎನ್ನುವುದು ಆರೋಪವಾಗಿದೆ.

ಈ ಪ್ರಕರಣದಲ್ಲಿ ದರ್ಶನ್ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಜೈಲಿಗೆ ಹೋಗಿ ಬಂದ ಮೇಲೆ ಪವಿತ್ರಾ ಗೌಡರಿಂದ ಅಂತರ ಕಾಯ್ದುಕೊಂಡಿದ್ದಾರೆ. ಎಲ್ಲೇ ಹೋಗುವುದಿದ್ದರೂ ಪತ್ನಿ ವಿಜಯಲಕ್ಷ್ಮಿ ಜೊತೆಗೇ ಹೋಗುತ್ತಿದ್ದಾರೆ. ಹೀಗಾಗಿ ಈಗ ಪವಿತ್ರಾ ಗೌಡ ಇಂತಹದ್ದೊಂದು ಪೋಸ್ಟ್ ಹಾಕಿರಬಹುದೇ ಎಂಬ ಅನುಮಾನ ಕಾಡುತ್ತಿದೆ.

ಇನ್ ಸ್ಟಾಗ್ರಾಂನಲ್ಲಿ ರಾಯರ ಫೋಟೋ ಹಾಕಿರುವ ಪವಿತ್ರಾ ‘ಮನುಷ್ಯರು ಬಣ್ಣ ಬದಲಾಯಿಸಿದರೇನು.. ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ.!! ನನ್ನ ಮೌನ ದೌರ್ಬಲ್ಯವಲ್ಲ. ಇದು ದೇವರ ತೀರ್ಮಾನದ ಮೇಲಿರುವ ನಂಬಿಕೆ’ ಎಂದು ಬರೆದುಕೊಂಡಿದ್ದಾರೆ. ತಮ್ಮಿಂದ ದೂರವುಳಿದಿರುವ ದರ್ಶನ್ ಗೇ ಟಾಂಗ್ ಕೊಟ್ಟು ಪವಿತ್ರಾ ಇಂತಹದ್ದೊಂದು ಸಂದೇಶ ಹಾಕಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಸುಪ್ರೀಂಕೋರ್ಟ್ ನಲ್ಲಿ ಸದ್ಯದಲ್ಲೇ ಆರೋಪಿಗಳ ಬೇಲ್ ಭವಿಷ್ಯ ತೀರ್ಮಾನವಾಗಲಿದ್ದು ಆ ಕಾರಣಕ್ಕೂ ಪವಿತ್ರಾ ಈ ಪೋಸ್ಟ್ ಹಾಕಿರಬಹುದು ಎನ್ನಲಾಗುತ್ತಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಮಸ್ಯೆಗಳನ್ನು ಎದುರಿಸಲು ಅಣ್ಣಾವ್ರು ಹೇಳಿದ ಈ ಮಾತು ನಮಗೆಲ್ಲಾ ಪಾಠವಾಗಬೇಕು

ಅಮ್ಮ ಬೇಡ ಎಂದ ಅಪ್ಪನ ಹೆಸರೂ ಬೇಡ ಎಂದು ದಳಪತಿ ವಿಜಯ್ ಪುತ್ರ ಖಡಕ್ ನಿರ್ಧಾರ

66ನೇ ವಯಸ್ಸಿನಲ್ಲಿ ಗರ್ಭಧಾರಣೆ, ವದಂತಿಗೆ ನಟಿ ನೀನಾ ಗುಪ್ತಾ ಪ್ರತಿಕ್ರಿಯೆ

ನನ್ನ ಜೀವನ ಹೇಗಿರಬೇಕೆಂದು ನಿರ್ಧಾರ ಮಾಡೋದು ನಾನೇ: ಅಡಿಯೋ ವೈರಲ್ ಮಾಡಿದವರಿಗೆ ರಶ್ಮಿಕಾ ಖಡಕ್ ಸಂದೇಶ

ಶ್ರೀಗಂಧದ ಗುಡಿ ಧಾರವಾಹಿಗೂ ಗುಡ್ ಬೈ ಹೇಳಿದ ಸಂಜನಾ ಬುರ್ಲಿ

ಮುಂದಿನ ಸುದ್ದಿ
Show comments