Webdunia - Bharat's app for daily news and videos

Install App

ರಜನಿ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನ..?

Webdunia
ಗುರುವಾರ, 26 ಮಾರ್ಚ್ 2015 (09:56 IST)
ಬರಹಗಾರ, ನಿರ್ದೇಶಕ ಪವನ್ ವಡೆಯರ್ ಅವರ ಬಹುದಿನದ ಕನಸು ಈಗ ನನಸಾಗಿದೆ. ಅವರು ಅತ್ಯಂತ ಖುಷಿಯ ಕ್ಷಣ ನಿನ್ನೆ ನಡೆಯಿತು. ಅದರ ಬಗ್ಗೆ ಅವರು ಟ್ವೀಟಿಸಿ ಹೇಳಿದ್ದಾರೆ. ಪವನ್ ವಡೆಯರ್ ಅವರು ಅತ್ಯಂತ ಖುಷಿಯಿಂದ, ಆನಂದ ಮತ್ತು ಸಂಭ್ರಮದಿಂದ ತಮ್ಮ ಭಾವವನ್ನು ವ್ಯಕ್ತ ಪಡಿಸಿದ್ದಾರೆ. ಪವನ್ ಚಿತ್ರನಿರ್ಮಾಪಕರನ್ನು ಭೇಟಿ ಮಾಡಿರುವುದು ಮಾತ್ರ ಇದಕ್ಕೆ ಕಾರಣವಲ್ಲ, ಜೊತೆ ಇನ್ನು ಒಂದಷ್ಟು ಸಂಗತಿಗಳು ಅವರ ಖುಷಿಗೆ ಕಾರಣವಾಗಿದೆ.  
ಪವನ್ ವಡೆಯರ್ ಅವರು ಸೂಪರ್ ಸ್ಟಾರ್ ಗಳಿಗೆ ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದು ಅಲ್ಲದೆ ಅವರೊಂದಿಗೆ ಮಾತನಾಡುವ  ಅವಕಾಶ ದೊರಕಿದ್ದು ನಿನ್ನೆ ಪವನ್  ಬದುಕಿನ ವಿಶೇಷ. ಈ ಬಗ್ಗೆ ಟ್ವೀಟ್ ಮಾಡಿ  ರಜನಿಕಾಂತ್ ಸರ್ ಅವರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿದೆ. ಆ ಕಾರಣದಿಂದ ನನಗೆ ತುಂಬಾ ಖುಷಿ ಆಗಿದೆ. ನನ್ನ ಕನಸು ನನಸಾಗಿದೆ ಎಂದು ಹೇಳಿದ್ದರು. ಮೊನ್ನೆ ಅವರು ನಾನು ತುಂಬಾ ಎಗ್ಜೈಟ್ ಆಗಿದ್ದೇನೆ.ಆ ಬಗ್ಗೆ ಸಧ್ಯದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದರು. ಇವೆಲ್ಲ ಗಮನಿಸಿದರೆ ರಜನಿಯ ಮುಂದಿನ ಚಿತ್ರವನ್ನು ಈ ಯುವ ನಿರ್ದೇಶಕ ನಿರ್ದೇಶಿಸುತ್ತಾರಾ?  ಸಮಯ ಎಲ್ಲವನ್ನು ಹೇಳುತ್ತದೆ.ನಾವು ಪವನ್ ಕನಸು ನನಸಾಗಲಿ ಎಂದು ಹಾರೈಸೋಣ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments