Select Your Language

Notifications

webdunia
webdunia
webdunia
webdunia

ಟೈಟಲ್ ಗಾಗಿ ಕಾಯುತ್ತಿರುವ ರವಿಚಂದ್ರನ್ ರೀಮೇಕ್ ಚಿತ್ರ ದೃಶ್ಯಂ!

ಟೈಟಲ್ ಗಾಗಿ ಕಾಯುತ್ತಿರುವ ರವಿಚಂದ್ರನ್ ರೀಮೇಕ್ ಚಿತ್ರ ದೃಶ್ಯಂ!
ಬೆಂಗಳೂರು , ಶುಕ್ರವಾರ, 9 ಮೇ 2014 (10:36 IST)
ಈ4 ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಮುಖೇಶ್.ಆರ್.ಮೆಹತಾ ಅವರು ನಿರ್ಮಿಸುತ್ತಿರುವ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರ ದೃಶ್ಯಂ.ಆ  ಚಿತ್ರದ ಎಲ್ಲಾ ಕೆಲಸ  ಮುಗಿದರು ಶೀರ್ಷಿಕೆ ಸಿಕ್ಕಿಲ್ಲ. ನಿರ್ದೇಶಕ ಪಿ ವಾಸು ಅವರು ಚಿತ್ರದ  ಶೀರ್ಷಿಕೆ ಬಗ್ಗೆ ಹೆಚ್ಚು ಗಮನ ನೀಡಿಲ್ಲ. ಚಿತ್ರ  ಮಡಿಕೇರಿಯಲ್ಲಿ ಮೂವತ್ತು ದಿನಗಳ ಚಿತ್ರೀಕರಣ ಪೂರೈಸಿದೆ .
 
ರವಿಚಂದ್ರನ್, ನವ್ಯಾನಾಯರ್, ಶಿವಾಜಿಪ್ರಭು, ಆಶಾಶರತ್, ಶ್ರೀನಿವಾಸಮೂರ್ತಿ, ಅಚ್ಯುತಕುಮಾರ್, ಸುಚೀಂದ್ರಪ್ರಸಾದ್, ಶಿವರಾಂ ಜೈಜಗದೀಶ್,ಸಾಧುಕೋಕಿಲ ಮುಂತಾದವರು ಚಿತ್ರದಲ್ಲಿ ಇದ್ದಾರೆ.
 
ಖ್ಯಾತ ನಿರ್ದೇಶಕ ಪಿ.ವಾಸು ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಮಲೆಯಾಳಂ ಚಿತ್ರ  'ದೃಶ್ಯಂ' ರಿಮೇಕ್. ಮಧುನೀಲಕಂಠನ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದಾರೆ. ಎಂ.ಎಸ್.ರಮೇಶ್ ,ಸಂಭಾಷಣೆ ಬರೆದರೆ ವಿ.ನಾಗೇಂದ್ರಪ್ರಸಾದ್ ಗೀತರಚನೆ  ಚಿತ್ರದಲ್ಲಿದೆ. ಈ ಚಿತ್ರವು ಈ ತಿಂಗಳು 30 ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ.ಅಂದು ರವಿಚಂದ್ರನ್ ಹುಟ್ಟು ಹಬ್ಬ! 

Share this Story:

Follow Webdunia kannada