Select Your Language

Notifications

webdunia
webdunia
webdunia
webdunia

ಒರಟ ಪ್ರಶಾಂತ್ ಬರುತ್ತಿದ್ದಾರೆ ಚಿರಾಯುವಾಗಿ....!

ಒರಟ ಪ್ರಶಾಂತ್ ಬರುತ್ತಿದ್ದಾರೆ ಚಿರಾಯುವಾಗಿ....!
, ಶುಕ್ರವಾರ, 19 ಡಿಸೆಂಬರ್ 2014 (10:45 IST)
ಇಂದು ಕನ್ನಡ ಪ್ರೇಕ್ಷಕರನ್ನು ರಂಜಿಸಲು ಒರಟ ಐ ಲವ್ ಯು ಖ್ಯಾತಿಯ ಪ್ರಶಾಂತ್ ಅವರು ಶುಭಾ ಪೂಂಜಾ ಅವರ ಜೊತೆ ಬರುತ್ತಿದ್ದಾರೆ. ಹೌದು ನಿಮ್ಮ  ಊಹೆ ಸರಿ ಇಂದು ಚಿರಾಯು ಚಿತ್ರ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಹಾಗೂ ನಟನೆ ಇಷ್ಟೂ ಹೊಣೆಯನ್ನು ಖುದ್ದು ಪ್ರಶಾಂತ್ ಒಬ್ಬರೇ ಹೊತ್ತಿದ್ದಾರೆ. 
ಇತ್ತೀಚೆಗಷ್ಟೇ ಅವರ ನಟನೆಯ ಬೆಳ್ಳಿ ಚಿತ್ರ ಬಿಡುಗಡೆ ಆಗಿತ್ತು. ಬಾಕ್ಸಾಫೀಸಲ್ಲಿ ಹೇಳಿಕೊಳ್ಳುವಷ್ಟು ಶಬ್ಧ ಮಾಡಿರಲಿಲ್ಲ ಆ ಚಿತ್ರ. ಅದು ಬಹು ತಾರೆಯ ಚಿತ್ರವಾಗಿತ್ತು. ಈಗ ಪ್ರಶಾಂತ್ ಅವರ ಕನಸಿನ ಚಿರಾಯು ಚಿತ್ರಮಂದಿರಕ್ಕೆ ಬಂದಿದೆ.
 
@ ಇಂದು ಸಾರಿ ಕಣೆ ಎನ್ನುವ ಸಿನಿಮಾ ಸಹ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ವಿಜಯ ಲಕ್ಷ್ಮಿ ಸಿಂಗ್, ದಿನಕರ್ ತೂಗು ದೀಪ್, ಶಾಹುರಾಜ್ ಶಿಂಧೆಯ ಕೈಕೆಳಗೆ ಕೆಲಸ ಮಾಡಿದ್ದ ರೂಪೇಶ್ ಸಾರಿ ಕಣೆ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಪೂರ್ಣ ಪ್ರಮಾಣದ ನಿರ್ದೇಶಕರಾಗಿದ್ದಾರೆ. ಎಸ್ ಎಸ್ ಪ್ರೊಡಕ್ಷನ್ ಇದನ್ನು ನಿರ್ಮಾಣ ಮಾಡಿದೆ. ಜಾಲಿ ಡೇಸ್ ನ ಹೀರೋಯಿನ್ ಇದರ ನಾಯಕಿ ಆಗಿದ್ದಾರೆ. @ ಸಂತೋಷಕ್ಕೆ ಎನ್ನುವ ಹೆಸರಿನ ಚಿತ್ರಕ್ಕೂ ಇಂದು ಬಿಡುಗಡೆಯ ಸಂಭ್ರಮ. ಶರವಣ ದಾಸ್ ಅವರ ಕಥೆ, ಚಿತ್ರಕಥೆ, ನಿರ್ದೇಶನ ಇರುವ ಚಿತ್ರಕ್ಕೆ ಜೀವ ಹೀರೋ ಆಗಿದ್ದಾರೆ. ರಂಗಸ್ವಾಮಿ ಛಾಯಾಗ್ರಹಣ ಹೊಂದಿದೆ. 
 

Share this Story:

Follow Webdunia kannada