ಈಟೀವಿ ಯಲ್ಲಿ ಅತಿ ಹೆಚ್ಚಿನ ಪ್ರಸಿದ್ಧಿ ಪಡೆದ ಕಾರ್ಯಕ್ರಮ ಎದೆ ತುಂಬಿ ಹಾಡಿದೆನು. ಈ ಕಾರ್ಯಕ್ರಮ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಡಾ. ಎಸ್ ಪಿ ಬಾಲ ಸುಬ್ರಮಣ್ಯಮ್ ಅವರ ನೇತೃತ್ವದಲ್ಲಿ ನಡೆದಿತ್ತು . ಈಗ ಮತ್ತೆ ಈ ಕಾರ್ಯಕ್ರಮ ಈಟೀವಿ ನ್ಯೂಸ್ ನಲ್ಲಿ ಪ್ರಸಾರ ಆಗುತ್ತಿದೆ.
ಸುಮಾರು 12 ವರ್ಷಗಳ ಕಾಲ ಈ ಕಾರ್ಯಕ್ರಮದ ಮೂಲಕ ಹೊಸ ಪ್ರತಿಭೆಗಳನ್ನು ಹೆಕ್ಕಿ ಕೊಟ್ಟಿದ್ದರು. ಈಗ ಮತ್ತೊಮ್ಮೆ ಕಾರ್ಯಕ್ರಮ ಈಟೀವಿ ನ್ಯೂಸ್ ನಲ್ಲಿ ಆರಂಭವಾಗಿದೆ. ಇದು ಕೆನರಾ ಬ್ಯಾಂಕ್ ಅವರ ಸಹಯೋಗದಲ್ಲಿ ನಡೆಯುತ್ತಿದೆ. ಮೊದಲ ಅವತರಣಿಕೆಯು ಸಹ ಕೆನರಾ ಬ್ಯಾಂಕ್ ನವರ ನಿರ್ಮಾಣ ಮಾಡಿದ್ದು.9 ರಿಂದ 12 ವರ್ಷಗಳ ವಯೋಮಿತಿಯ ಮಕ್ಕಳ ಹಾಡಿನ ಪ್ರತಿಭೆ ಹೆಕ್ಕುವ ಕೆಲಸ ಈ ಕಾರ್ಯಕ್ರಮದಿಂದ ಆಗುತ್ತಿದೆ. ಪ್ರತಿವಾರ ಶುಕ್ರವಾರ ಮತ್ತು ಶನಿವಾರ ಇದು ಪ್ರಸಾರವಾಗುತ್ತಿದೆ. ಇದರಲ್ಲಿ ಒಟ್ಟು 24 ಸ್ಪರ್ಧಿಗಳಿದ್ದಾರೆ.