Select Your Language

Notifications

webdunia
webdunia
webdunia
webdunia

ಶ್ರಾವ್ಯಳಿಗೆ ತೊಂದರೆ ನೀಡುತ್ತಿರುವ ಅಶ್ಲೀಲ ಸಂದೇಶಗಳು

ಶ್ರಾವ್ಯಳಿಗೆ ತೊಂದರೆ ನೀಡುತ್ತಿರುವ ಅಶ್ಲೀಲ ಸಂದೇಶಗಳು
, ಶುಕ್ರವಾರ, 22 ಮೇ 2015 (10:19 IST)
ಕನ್ನಡ ಚಿತ್ರರಂಗದ ವಿವಾದಿತ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯ. ಆಕೆ ಧಾರವಾಹಿಗಳ  ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರೂ ಸಹ ಆ ಬಳಿಕ ಹಿರಿತೆರೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡರು. ಪ್ರಸ್ತುತ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿರುವ ಈ ಕಲಾವಿದೆ ವಿಜಯ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಿದ್ದಾರೆ.ಆಕೆಯ ಜೊತೆ ಅಪ್ಪಾಜಿ ಓಂ ಸಹ ಹೋಗಿ ಮಗಳಿಗೆ ಎದುರಾಗಿರುವ ಕಷ್ಟವನ್ನು ಪೊಲೀಸರ ಮುಂದೆ ಹೇಳಿದ್ದಾರೆ. ಆಕೆ ಮೊಬೈಲ್ಗೆ ಅಶ್ಲೀಲ ಸಂದೇಶಗಳು ಕೆಲವು ದಿನಗಳಿಂದ ಬರ್ತಾ ಇದೆಯಂತೆ. ಅಲ್ಲದೆ ಅದೇರೀತಿ ಕೆಟ್ಟ ಕೆಟ್ಟ ಸಂದೇಶಗಳು ವಾಟ್ಸಪ್ ಬಾಗಿಲನ್ನು ಸಹಿತ ತಟ್ಟಿವೆ. ಇದರ ಉಪಟಳ ತಾಳಲಾಗದೆ ಆಕೆ ತಕ್ಷಣ ತನ್ನ ತಂದೆ ಜೊತೆ ಪೊಲೀಸರ ಬಳಿ ಬಂದಿದ್ದಾರೆ. 
ಕಳೆದ ಕೆಲವು ದಿನಗಳಿಂದ ತಮಗೆ ಕೆಟ್ಟ ಸಂದೇಶಗಳು ಬರುತ್ತಿರುವುದನ್ನು ಆಕೆ ಪೊಲೀಸರ ಮುಂದೆ ತೋರಿದ್ದಾರೆ. ಈಗ ಪೊಲೀಸರು ಆ ದೂರು ದಾಖಲಿಸಿಕೊಂಡು ಅಪರಾಧಿಯನ್ನು ಹಿಡಿಯುವುದಕ್ಕೆ ಪಣ ತೊಟ್ಟಿದ್ದಾರೆ.. ಹುಡುಕಾಟ ಆರಂಭವಾಗಿದೆ. ಅಪರಾಧಿ ಸಿಕ್ಕ ತಕ್ಷಣ ನಾವು ಆತನ/ಆಕೆಯ ವಿವರ ಬರೆಯುತ್ತೇವೆ.

Share this Story:

Follow Webdunia kannada