ಕಳೆದ ಆಗಸ್ಟ್ 2 ರಂದು ಮುಹೂರ್ತ ಆಚರಿಸಿಕೊಂಡು ಮುನ್ನುಗ್ಗುತ್ತಿರುವ `ದಾಂಗಡಿ’ ಚಿತ್ರ ಬರಹಗಾರ ಸಿದ್ದರಾಮ್ ಕಾರ್ಣಿಕ್ ಅವರ ನಿರ್ದೇಶನದಲ್ಲಿ ಉತ್ತರ ಕರ್ನಾಟಕದ ಸುತ್ತ ಮುತ್ತ 28 ದಿವಸ ಚಿತ್ರೀಕರಣ ಮಾಡಿ ಸಂಪೂರ್ಣಗೊಂಡಿದೆ.
ಸಿದ್ದರಾಮ್ ಕಾರ್ಣಿಕ್ ಅವರು ಈ ಹಿಂದೆ ಡಾ ಅಂಬೇಡ್ಕರ್ ಪಾತ್ರದಲ್ಲಿ `ರಮಾಬಾಯಿ’ ಸಿನಿಮಾದಲ್ಲಿ ಅಬಿನಯಿಸಿದ್ದರು. ಈ ಚಿತ್ರಕ್ಕಾಗಿ ಅವರು ಕೆಲವು ಅನ್ವೇಷಣೆ ಸಹ ಮಾಡಿದ್ದಾರೆ. ಅವರದೇ ಕಥೆಯನ್ನೂ ಸಹ ಈ ಚಿತ್ರಕ್ಕೆ ಬಳಸಲಾಗಿದೆ. ಈ ಚಿತ್ರದಲ್ಲಿಯೂ ಇವರು ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
`ದಾಂಗಡಿ’ ಸಿನಿಮಾದಲ್ಲಿ ನವರಸಗಳನ್ನು ನಿರ್ದೇಶಕರು ತುಂಬಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಸುರೇಂದ್ರ ಹೂಗಾರ್ ಈ ಚಿತ್ರದ ನಿರ್ಮಾಪಕರು. ಶಿರಸಿ ಮೂಲದ ಕನಕಲಕ್ಷ್ಮಿ ಚಿತ್ರದ ಕಥಾ ನಾಯಕಿ. ಸಂಜೀವ್ ಹಾಗೂ ಜಯಸೂರ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹಾಡುಗಳು ಇರುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.