Webdunia - Bharat's app for daily news and videos

Install App

ಕನ್ನಡ ಚಿತ್ರಕ್ಕೆ ಎಸಿ ಹಾಕಲ್ಲ, ಬೇಕಾದ್ರೆ ನೋಡಿ.. ಇಲ್ಲವಾದ್ರೆ ಎದ್ದೋಗಿ ಅಂದರಂತೆ..!

Webdunia
ಶನಿವಾರ, 8 ಏಪ್ರಿಲ್ 2017 (15:53 IST)
ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗಿದ್ದಾರಾ..? ಈ ಪ್ರಶ್ನೆ ಹುಟ್ಟಲು ಕಾರಣ ಬೆಂಗಳೂರಿನ ಮಾಲ್`ವೊಂದರಲ್ಲಿ ಇವತ್ತು ನಡೆದಿದೆ ಎನ್ನಲಾದ ಒಂದು ಘಟನೆ. ರಾಜಕುಮಾರ ಚಿತ್ರ ನೋಡಲು ನಾಗವಾರದ ಬಳಿಯ ಎಲಿಮೆಂಟ್ಸ್ ಮಾಲ್`ಗೆ ಹೋದ ಪ್ರೇಕ್ಷಕರಿಗೆ ಶಾಕ್ ಆಗಿದೆ. ಕನ್ನಡ ಚಿತ್ರಕ್ಕೆ ಎಸಿ ಹಾಕೋದಿಲ್ಲ. ಬೇಕಾದರೆ ನೋಡಿ ಇಲ್ಲವಾದರೆ ಹೊರಡಿ ಎಂದು ಮಾಲ್ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆಂದು ವರದಿಯಾಗಿದೆ. 
 

ಸಿನಿಮಾ ಆರಂಭವಾಗಿ ಅರ್ಧಗಂಟೆ ಕಳೆದರೂ ಎಸಿ ಹಾಕಿದಿದ್ದ ಬಗ್ಗೆ ಪ್ರೇಕ್ಷಕರು ಪ್ರಶ್ನಿಸಿದ್ದಾರೆ. ಆದರೂ, ಎಸಿ ಹಾಕಿಲ್ಲವಾದ್ದರಿಂದ ಪ್ರೇಕ್ಷಕರು ಮತ್ತೊಮ್ಮೆ ಎಸಿ ಕೇಳಿದ್ದಕ್ಕೆ ಕನ್ನಡ ಚಿತ್ರಕ್ಕ ಎಸಿ ಹಾಕುವುದಿಲ್ಲ ಎಂಬ ಉತ್ತರ ಬಂದಿದೆ ಎನ್ನಲಾಗಿದೆ. ಮಾಲ್ ಸಿಬ್ಬಂದಿಯ ಈ ವರ್ತನೆಯಿಂದ ಬೇಸತ್ತ ಜನ ಪ್ರತಿಭಟನೆ ಸಹ ನಡೆಸಿದ್ದಾರೆ.

ಈ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಇಂತಹ ವರ್ತನೆ ತೋರಿದವರನ್ನ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಮಾಲ್ ಮಾಲೀಕರನ್ನ ಛೇಂಬರ್`ಗೆ ಕರೆಸಿ ವಿವರಣೆ ಪಡೆಯುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments