Webdunia - Bharat's app for daily news and videos

Install App

ಬಾಲಿವುಡ್ ಕಡೆಗೆ ವಲಸೆ ಹೊರಟ ನಿತ್ಯಾ ಮೆನನ್

Webdunia
ಸೋಮವಾರ, 21 ಏಪ್ರಿಲ್ 2014 (09:51 IST)
ಬಾಲಿವುಡ್ ಒಂದು ಬೃಹತ್ ಸಿನಿ ಪ್ರಪಂಚ. ಭಾರತೀಯ ಕಲಾವಿದರಿಗೆ ಆ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ತೋರುವ ಅವಕಾಶ ಸಿಕ್ಕರೆ ಸಾಕು  ಎಂದು  ಸದಾ ಆಸೆ ಪಡುತ್ತಿರುತ್ತಾರೆ. ಅದರಲ್ಲೂ  ದಕ್ಷಿಣ ಭಾರತದ ನಟೀಮಣಿಗಳಿಗಂತೂ ಒಮ್ಮೆ ಅಲ್ಲಿ ಅವಕಾಶ  ಸಿಕ್ಕರೆ ಸಾಕು ಅನ್ನುವ ಕನಸು ಸದಾ ಇರುತ್ತದೆ. 
 
ಅದರಲ್ಲೂ ಒಂದೆರಡು ಹಿಟ್ ಚಿತ್ರಗಳನ್ನು ನೀಡಿದರೆ ಸಾಕು ಅವರಿಗೆ  ಬಾಲಿವುಡ್ ನಲ್ಲಿ ತಮ್ಮ ಪ್ರತಿಭೆ ತೋರುವ ಆಶಯ ಉಂಟಾಗುತ್ತದೆ. ಈ ಪಟ್ಟಿಗೆ ಇಲಿಯಾನ, ತಮನ್ನ, ಕಾಜಲ್ , ಶ್ರುತಿ ಹಾಸನ್ ಮುಂತಾದವರು ಸೇರಿದ್ದಾರೆ. ಪ್ರಸ್ತುತ ಈ ಪಟ್ಟಿಗೆ ನಿತ್ಯಮೆನನ್ ಸೇರಿದ್ದಾಳೆ. ಅಲಾ ಮೊದಲೈಯ್ಯಿಂದಿ ಚಿತ್ರದಲ್ಲಿನನಿತ್ಯ ಮೆನನ್  ನಟನೆಗೆ ಟಾಲಿವುಡ್ ಪ್ರೇಕ್ಷಕರು ಮಾರು ಹೋಗಿದ್ದಾರೆ. 
 
ಯಶಸ್ಸಿನ ಖುಷಿಯಲ್ಲಿ ಇರುವ ನಿತ್ಯ ಮೆನನ್ ತನ್ನ ಗಮನವನ್ನು ಈಗ ಬಾಲಿವುಡ್ ಕಡೆಗೆ ಕೇಂದ್ರೀಕರಿಸಿದ್ದಾಳೆ.ಸದ್ಯಕ್ಕೆ ಆಕೆಗೆ ಹೇಳಿಕೊಳ್ಳುವ ಅವಕಾಶ ಟಾಲಿವುಡ್ ನಲ್ಲಿ ಇಲ್ಲ ಆದ ಕಾರಣ ಅತ್ತ ಸಾಗುವ ಪ್ರಯತ್ನ ಮಾಡಿದ್ದಾಳೆ ಎಂದು ಹೇಳುತ್ತಿದೆ ಒಂದು ಮೂಲ. ಏನೇ ಆಗಿರಲಿ ಆಕೆ ನಟಿಸಿದ್ದ ಸೂಪರ್ ಹಿಟ್ ಚಿತ್ರ ಅಲಾ ಮೊದಲೈಯ್ಯಿಂದಿ ಯನ್ನು ಹಿಂದಿಗೆ ರೀಮೇಕ್ ಮಾಡಲು ಸಿದ್ಧತೆ ನಡೆಸಿದೆ. 
 
ಅಲ್ಲಿಯೂ  ಸಹ ನಂದಿನಿ ರೆಡ್ಡಿ ನಿರ್ದೇಶಕರಾಗಿದ್ದಾರೆ. ಆದರಲ್ಲಿ ನಿತ್ಯ ಮೆನನ್ ಗೆ ಹೀರೋಯಿನ್ ಆಗುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ನಂದಿನಿ. ಈ ಚಿತ್ರದಲ್ಲಿ ಬಾಲಿವುಡ್ ಯಂಗ್ ಹೀರೋ  ನಾಯಕ ಆಗುವ  ಸಂಭವ ಇದೆಯಂತೆ. ವಿಷಯ ಏನೇ ಇರಲಿ.. ನಿತ್ಯಳಿಗೆ ಅವಕಾಶ ಸಿಕ್ಕಿದೆ ಬಾಲಿವುಡ್ ನಲ್ಲಿ ನಟಿಸಲು ಅದೇ ಸದ್ಯದ ಸಂಗತಿ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments