ಬಾಲಿವುಡ್ ಒಂದು ಬೃಹತ್ ಸಿನಿ ಪ್ರಪಂಚ. ಭಾರತೀಯ ಕಲಾವಿದರಿಗೆ ಆ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ತೋರುವ ಅವಕಾಶ ಸಿಕ್ಕರೆ ಸಾಕು ಎಂದು ಸದಾ ಆಸೆ ಪಡುತ್ತಿರುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ನಟೀಮಣಿಗಳಿಗಂತೂ ಒಮ್ಮೆ ಅಲ್ಲಿ ಅವಕಾಶ ಸಿಕ್ಕರೆ ಸಾಕು ಅನ್ನುವ ಕನಸು ಸದಾ ಇರುತ್ತದೆ.
ಅದರಲ್ಲೂ ಒಂದೆರಡು ಹಿಟ್ ಚಿತ್ರಗಳನ್ನು ನೀಡಿದರೆ ಸಾಕು ಅವರಿಗೆ ಬಾಲಿವುಡ್ ನಲ್ಲಿ ತಮ್ಮ ಪ್ರತಿಭೆ ತೋರುವ ಆಶಯ ಉಂಟಾಗುತ್ತದೆ. ಈ ಪಟ್ಟಿಗೆ ಇಲಿಯಾನ, ತಮನ್ನ, ಕಾಜಲ್ , ಶ್ರುತಿ ಹಾಸನ್ ಮುಂತಾದವರು ಸೇರಿದ್ದಾರೆ. ಪ್ರಸ್ತುತ ಈ ಪಟ್ಟಿಗೆ ನಿತ್ಯಮೆನನ್ ಸೇರಿದ್ದಾಳೆ. ಅಲಾ ಮೊದಲೈಯ್ಯಿಂದಿ ಚಿತ್ರದಲ್ಲಿನನಿತ್ಯ ಮೆನನ್ ನಟನೆಗೆ ಟಾಲಿವುಡ್ ಪ್ರೇಕ್ಷಕರು ಮಾರು ಹೋಗಿದ್ದಾರೆ.
ಯಶಸ್ಸಿನ ಖುಷಿಯಲ್ಲಿ ಇರುವ ನಿತ್ಯ ಮೆನನ್ ತನ್ನ ಗಮನವನ್ನು ಈಗ ಬಾಲಿವುಡ್ ಕಡೆಗೆ ಕೇಂದ್ರೀಕರಿಸಿದ್ದಾಳೆ.ಸದ್ಯಕ್ಕೆ ಆಕೆಗೆ ಹೇಳಿಕೊಳ್ಳುವ ಅವಕಾಶ ಟಾಲಿವುಡ್ ನಲ್ಲಿ ಇಲ್ಲ ಆದ ಕಾರಣ ಅತ್ತ ಸಾಗುವ ಪ್ರಯತ್ನ ಮಾಡಿದ್ದಾಳೆ ಎಂದು ಹೇಳುತ್ತಿದೆ ಒಂದು ಮೂಲ. ಏನೇ ಆಗಿರಲಿ ಆಕೆ ನಟಿಸಿದ್ದ ಸೂಪರ್ ಹಿಟ್ ಚಿತ್ರ ಅಲಾ ಮೊದಲೈಯ್ಯಿಂದಿ ಯನ್ನು ಹಿಂದಿಗೆ ರೀಮೇಕ್ ಮಾಡಲು ಸಿದ್ಧತೆ ನಡೆಸಿದೆ.
ಅಲ್ಲಿಯೂ ಸಹ ನಂದಿನಿ ರೆಡ್ಡಿ ನಿರ್ದೇಶಕರಾಗಿದ್ದಾರೆ. ಆದರಲ್ಲಿ ನಿತ್ಯ ಮೆನನ್ ಗೆ ಹೀರೋಯಿನ್ ಆಗುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ನಂದಿನಿ. ಈ ಚಿತ್ರದಲ್ಲಿ ಬಾಲಿವುಡ್ ಯಂಗ್ ಹೀರೋ ನಾಯಕ ಆಗುವ ಸಂಭವ ಇದೆಯಂತೆ. ವಿಷಯ ಏನೇ ಇರಲಿ.. ನಿತ್ಯಳಿಗೆ ಅವಕಾಶ ಸಿಕ್ಕಿದೆ ಬಾಲಿವುಡ್ ನಲ್ಲಿ ನಟಿಸಲು ಅದೇ ಸದ್ಯದ ಸಂಗತಿ.