Webdunia - Bharat's app for daily news and videos

Install App

ಶಿವರಾಜ್ ಕುಮಾರ್ ಸಿನಿಮಾಗೆ ಹೊಸ ವಿಲನ್ ಎಂಟ್ರಿ

Webdunia
ಮಂಗಳವಾರ, 26 ಜುಲೈ 2016 (14:08 IST)
ಶಿವರಾಜ್ ಕುಮಾರ್ ಅವರ ಟಗರು ಸಿನಿಮಾ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿಯನ್ನು ಹೆಚ್ಚಿಸುತ್ತಲೇ ಸಾಗುತ್ತಿದೆ. ಸಿನಿಮಾದ ತಾರಾಬಳಗಕ್ಕೆ ಈಗ ಹೊಸ ಸೇರ್ಪಡೆಯಾದ ಬಗ್ಗೆ ನೀವೇನಾದ್ರು ಕೇಳಿದ್ರೆ ಸಿನಿಮಾವನ್ನು ಯಾವಾಗಪ್ಪಾ ನೋಡುತ್ತೇವೆ ಅಂತಾ ಕಾತುರರಾಗೋದು ಪಕ್ಕಾ. ಅಂತಹ ಸುದ್ದಿಯೊಂದು ಇದೀಗ ಸಿನಿಮಾ ತಂಡದಿಂದ ಹೊರ ಬಿದ್ದಿದೆ.
ಟಗರು ಸಿನಿಮಾದಲ್ಲಿ ಸಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕೆಡಂಸಂಪಿಗೆ ಸಿನಿಮಾ ಖ್ಯಾತಿಯ ಮಾನ್ವಿತಾ ಹರೀಶ್ ಅವರು ಕಾಣಿಸಿಕೊಳ್ಳುತ್ತಾರೆ ಅನ್ನೋ ವಿಚಾರ ಹೊರ ಬಿದ್ದಾಗಲೇ ಅಭಿಮಾನಿಗಳು ವ್ಹಾ! ಅನ್ನೋ ಉದ್ಗಾರ ತೆಗೆದಿದ್ದರು. ಇದೀಗ ಅಂತಹದ್ದೇ ಮತ್ತೊಂದು ಸುದ್ದಿಯೊಂದು ಹೊರ ಬಿದ್ದಿದೆ. ಈಗಾಗಲೇ ಸಿನಿಮಾದಲ್ಲಿ ವಿಲನ್ ಪಾತ್ರಕ್ಕೆ ಹುಡುಗಾಟ ಶುರುವಾಗಿದೆ ಅಂತಾ ಸಿನಿಮಾ ತಂಡ ಹೇಳಿತ್ತು.ಆದ್ರೀಗ ಸಿನಿಮಾದ ಖಳನಾಯಕನ ಆಯ್ಕೆ ಕೂಡ ನಡೆದಿದೆ. ರಾಟೆ ಸಿನಿಮಾ ಖ್ಯಾತಿಯ ಧನಂಜಯ್ ಅವರು ನಾಯಕನ ಸ್ಥಾನದಿಂದ ಈ ಸಿನಿಮಾದ ಮೂಲಕ ಖಳನಾಯಕನಾಗಿ ಮಿಂಚಲಿದ್ದಾರೆ.
 
ಅಂದ್ಹಾಗೆ ಇದೇ ಮೊದಲ ಬಾರಿಗೆ ಧನಂಜಯ್ ಅವರು ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಸೂರಿ ಅವರೇ ಧನಂಜಯ್ ಅವರನ್ನು ಸಿನಿಮಾದ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿದ್ದಾರಂತೆ.ಅಂದ್ಹಾಗೆ ಶಿವಣ್ಣ ಹಾಗೂ ಧನಂಜಯ್ ಅವರು ಕಾಂಬಿನೇಷನ್ ಹೇಗಿರುತ್ತೆ ಅಂತಾ ನೋಡೋದಕ್ಕೆ ಅಭಿಮಾನಿಗಳು ಯಾವ ರೀತಿ ಕಾತುರರಾಗಿದ್ದಾರೋ ಹಾಗೇ ಸಿನಿಮಾ ತಂಡ ಕೂಡ ಕಾತುರದಲ್ಲಿದೆಯಂತೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಧ್ಯಮದ ಮುಂದೆ ಮಹಿಳೆಗೆ ಕ್ಷಮೆ ಕೇಳಿದ ಯುವ ರಾಜ್‌ಕುಮಾರ್, ಕಾರಣ ಇಲ್ಲಿದೆ

ರಜನಿಕಾಂತ್ ನಟನೆಯ ಜೈಲರ್ 2 ಚಿತ್ರತಂಡದ ಜತೆ ಸೇರಿಕೊಂಡ್ರಾ ಬಾಲಿವುಡ್‌ನ ಸೂಪರ್ ಸ್ಟಾರ್‌

ರಾಜ್‌ ನಿಡಿಮೋರು, ಸುಮಂತಾ ಡೇಟಿಂಗ್ ವದಂತಿ: ಗಮನ ಸೆಳೆಯುತ್ತಿದೆ ಮಾಜಿ ಪತ್ನಿ ಪೋಸ್ಟ್‌

ನನ್ನ ತಪ್ಪೇನಿಲ್ಲ, ಯಾವ ಬೆದರಿಕೆಗೂ ಬಗ್ಗುವುದಿಲ್ಲ: ಗಂಭೀರ ಆರೋಪಕ್ಕೆ ಗೋಲ್ಡ್ ಸುರೇಶ್ ಪ್ರತಿಕ್ರಿಯೆ

ಥಗ್‌ ಲೈಫ್‌ ಸಿನಿಮಾಕ್ಕೆ ರಾಜ್ಯದಲ್ಲಿ ನಿರ್ಬಂಧ ಹೇರಿಲ್ಲ: ಚಾಟಿ ಬೆನ್ನಲ್ಲೇ ಸುಪ್ರೀಂಗೆ ಸರ್ಕಾರದ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments